HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                          ಮಾದರಿಕ್ಕಾಡಿನಲ್ಲಿ ಗಿಡ ವಿತರಣೆ
    ಬದಿಯಡ್ಕ : ಅಗಲ್ಪಾಡಿ ವೈಕುಂಠಗಿರಿ ಮಾದರಿಕ್ಕಾಡು ಶ್ರೀ ವಿಷ್ಣುಮೂತರ್ಿ ದೈವಸ್ಥಾನದ ವತಿಯಿಂದ ಕ್ಷೇತ್ರ ಪರಿಸರದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಗಿಡವಿತರಣಾ ಕಾರ್ಯಕ್ರಮವನ್ನು ಅಗಲ್ಪಾಡಿ ಶ್ರೀ ಅನ್ನಪೂಣರ್ೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್ ಅವರು ಗಿಡವನ್ನು ನೆಟ್ಟು, ವಿವಿಧ ಜಾತಿಯ ಗಿಡಗಳನ್ನು ವಿತರಿಸಿ ಉದ್ಘಾಟಿಸಿದರು.
ನಿವೃತ್ತ ಅಧ್ಯಾಪಕ ರಾಮಚಂದ್ರ ಭಟ್ ಉಪ್ಪಂಗಳ ಹಾಗೂ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್ ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಪರಿಸರಕ್ಕೆ ಲಭಿಸುವ ಧನಾತ್ಮಕ ಅಂಶಗಳ ಕುರಿತು ಮಾಹಿತಿಯನ್ನು ನೀಡಿದರು. ಕುಂಬ್ಡಾಜೆ ಗ್ರಾಮಪಂಚಾಯತು ಸದಸ್ಯೆ ಶಾಂತಾ ಎಸ್. ಭಟ್, ಅಶೋಕ ಗುಲಗುಂಜಿ, ವೆಂಕಟ್ರಮಣ ಭಟ್ ಗುಲಗುಂಜಿ, ಕೃಷ್ಣಮೂತರ್ಿ ಎಡಪ್ಪಾಡಿ, ಕೀರ್ತನ ಗುಲಗುಂಜಿ, ಶ್ರೀಕಾಂತ್ ಗುಲಗುಂಜಿ ಮೊದಲಾದವರು ಪಾಲ್ಗೊಂಡರು. ಸುಮಾರು 100ಕ್ಕೂ ಹೆಚ್ಚು ಜನರು ಶ್ರೀ ಕ್ಷೇತ್ರದ ಪ್ರಸಾದ ರೂಪವಾಗಿ ಗಿಡಗಳನ್ನು ಪಡೆದುಕೊಂಡರು. 6 ವಿವಿಧ ಜಾತಿಯ  ಸುಮಾರು 500ಕ್ಕೂ ಹೆಚ್ಚು ಗಿಡಗಳನ್ನು ವಿತರಿಸಲಾಗಿತ್ತು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries