HEALTH TIPS

No title

                   ರತ್ನಗಿರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ
   ಬದಿಯಡ್ಕ: ನೀಚರ್ಾಲು ಸಮೀಪದ ಬೇಳ ರತ್ನಗಿರಿಯ ಓಂಕಾರ್ ಫ್ರೆಂಡ್ಸ್ ಕ್ಲಬ್ ಮತ್ತು ಓಂಕಾರ ಬಾಲಗೋಕುಲ ಸಮಿತಿಯ ಆಶ್ರಯದಲ್ಲಿ ದ್ವಿತೀಯ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸ.2 ರಂದು ಭಾನುವಾರ ರತ್ನಗಿರಿ ಶ್ರೀಕುದುರೆಕ್ಕಾಳಿ ಭಗವತೀ ಕ್ಷೇತ್ರ ಪರಿಸರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
   ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8.30ಕ್ಕೆ ಶ್ರೀಕುದುರೆಕ್ಕಾಳಿ  ಭಗವತಿ ಕ್ಷೇತ್ರದ ಅರ್ಚಕರಿಂದ ದೀಪಪ್ರಜ್ವಲನೆಗೊಂಡು ಚಾಲನೆಗೊಳ್ಳುವುದು. ಬಳಿಕ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಕ್ರೀಡಾ ಸ್ಪಧರ್ೆಗಳು ನಡೆಯಲಿವೆ. ಭಜನಾ ಸ್ಪಧರ್ೆ, ಶ್ಲೋಕ ಹೇಳುವುದು, ಸಂಗೀತ ಕುಚರ್ಿ, ರಸಪ್ರಶ್ನೆ, ಲಿಂಬೆಚಮಚ, ದೇಶಭಕ್ತಿಗೀತೆ, ಮಡಿಕೆ ಒಡೆಯುವುದು, ಚೆಂಡು ಎಸೆತ ಮೊದಲಾದ ಸ್ಪಧರ್ೆಗಳನ್ನು ಏರ್ಪಡಿಸಲಾಗಿದೆ. ಅಪರಾಹ್ನ 3 ರಿಂದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ವೆಂಕಟಕೃಷ್ಣ ಭಟ್ ಪೆರ್ವ ಅಧ್ಯಕ್ಷತೆ ವಹಿಸುವರು. ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಜಿಲ್ಲಾ ಕ್ಷೇತ್ರ ಸಂರಕ್ಷಣಾ ಸಮಿತಿಯ ಯೋಗೀಶ್ ಎಂ.ಆರ್. ಧಾಮರ್ಿಕ ಉಪನ್ಯಾಸ ನೀಡುವರು. ರತ್ನಗಿರಿ ಕ್ಷೇತ್ರದ ಅಧ್ಯಕ್ಷ ಜಯರಾಮ ಪೊನ್ನಂಗಳ, ಕಾಸರಗೋಡು ಚೈಲ್ಡ್ಲೈನ್ ನ ಆನಂದ ಮೆಣಸಿನಪಾರೆ, ಸಾಮಾಜಿಕ ಕಾರ್ಯಕರ್ತ ಶಿವರಾಮ ಮೆಣಸಿನಪಾರೆ, ನಾರಾಯಣ ಅಡ್ಕತ್ತಬೈಲು, ಶಂಕರ ವಳಕುಂಜ ಮೊದಲಾದವರು ಉಪಸ್ಥಿತರಿದ್ದು ಶುಭಾಶಂಸನೆಗೈಯ್ಯುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries