HEALTH TIPS

No title

               ನಾಯ್ಕಾಪಿನಲ್ಲಿ ಶ್ರೀ ಕೃಷ್ಣ ಜಯಂತಿ ಮತ್ತು ಮೊಸರು ಕುಡಿಕೆ ಮಹೋತ್ಸವ
    ಕುಂಬಳೆ: ಶ್ರೀ ಶಾಸ್ತಾ ಮಿತ್ರ ಸಂಗಮ ಶಾಸ್ತಾನಗರ ನಾಯ್ಕಾಪು ಇದರ ವತಿಯಿಂದ ಸೆ.2 ರಂದು 25ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜಯಂತಿ ಮತ್ತು ಮೊಸರು ಕುಡಿಕೆ ಮಹೋತ್ಸವವು ನಡೆಯಲಿದೆ. ಬೆಳಗ್ಗೆ 9 ರಿಂದ ವಿವಿಧ ಸ್ಪಧರ್ಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪುಟಾಣಿ ಮಕ್ಕಳಿಗೆ ಮುದ್ದು ಕೃಷ್ಣ ಸ್ಪದರ್ೆ, ಮಹಿಳೆಯರಿಗೆ ಅರ್ಧವೃತ್ತ, ಸಾರ್ವಜನಿಕರಿಗೆ ಭಕ್ತಿಗೀತೆ, ಮಡಿಕೆ ಒಡೆಯುವುದು ಹಾಗೂ ಇನ್ನಿತರ ಮನರಂಜನಾ ಸ್ಪದರ್ೆಗಳನ್ನು ಆಯೋಜಿಸಲಾಗಿದೆ. ವಿವಿಧ ತಂಡಗಳಿಂದ ಮೊಸರು ಕುಡಿಕೆ ಸ್ಪಧರ್ೆ, ಮಧ್ಯಾಹ್ನ ಅನ್ನದಾನ ನಡೆಯಲಿದೆ. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಸಮ್ಮಾನ ಕಾರ್ಯಕ್ರಮಗಳು ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್, ಯಕ್ಷಗಾನ ಕಲಾವಿದ ಸದಾಶಿವ ಗಟ್ಟಿ, ಹಿರಿಯ ಭಜನಾ ಕಲಾವಿದ ಪದ್ಮನಾಭ ಚೆಟ್ಟಿಯಾರ್ ಮತ್ತು ಹಿರಿಯ ಯಕ್ಷಗಾನ ಕಲಾವಿದೆ ವಸುಂದರಾ ಹರೀಶ್ ಅವರನ್ನು ಸಮ್ಮಾನಿಸಲಾಗುವುದು. ಬಳಿಕ ಸ್ಪಧರ್ಾ ವಿಜೇತರಿಗೆ  ಬಹುಮಾನ ವಿತರಣೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ  ಯಶಸ್ವಿಗೊಳಿಸಬೇಕೆಂದು ಶ್ರೀ ಶಾಸ್ತಾ ಮಿತ್ರ ಸಂಗಮ ಇದರ ಅಧ್ಯಕ್ಷರು ಮತ್ತು ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries