HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಚೇರಾಲು ಶಾರದಾ ಮಹೋತ್ಸವ 18, 19 ರಂದು
     ಉಪ್ಪಳ: ಎರಡು ದಿನಗಳ ಸಾರ್ವಜನಿಕ ಶಾರದಾ ಮಹೋತ್ಸವವು 18, 19 ರಂದು ಚೇರಾಲು ಶಿವಾಜಿನಗರದಲ್ಲಿ ನಡೆಯಲಿದೆ. ಅ.18 ರಂದು ಬೆಳಿಗ್ಗೆ 7 ಕ್ಕೆ ಶಾರದಾ ಮೂತರ್ಿ ಪ್ರತಿಷ್ಠೆ ನಡೆಯಲಿದ್ದು. ವಿವಿಧ ಧಾಮರ್ಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವ ಶಾರದಾ ಮಹೋತ್ಸವದಲ್ಲಿ ವಿವಿಧ ಭಜನಾ ಸಂಘಗಳ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ, ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ನೇತೃತ್ವದಲ್ಲಿ ವಿವಿಧ ಸ್ಪಧರ್ೆಗಳು ನಡೆಯಲಿವೆ.
    ಅ.19 ರ ವಿಜಯದಶಮಿಯಂದು ಶಾರದಾ ಮೂತರ್ಿಯು ಭವ್ಯ ಮೆರವಣಿಗೆಯ ಮೂಲಕ ವಿಸಜರ್ಿಸಲ್ಪಡಲಿದೆ. 27 ನೇ ವರ್ಷದ ಶಾರದಾ ಮಹೋತ್ಸವದ ಪ್ರಥಮ ದಿನದಂದು ಗಣಹೋಮ, ಪ್ರತಿಷ್ಠೆಯ ನಂತರ ಬೆಳಿಗ್ಗೆ 8 ರಿಂದ ಸಂಜೆ 6 ರ ತನಕ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಆಯುಧಪೂಜೆ, ಸಂಜೆ ಛದ್ಮವೇಶ ಸ್ಪಧರ್ೆ, ರಾತ್ರಿ 7.30ಕ್ಕೆ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಯಕ್ಷಗಾನ ತರಬೇರತಿ ಕೇಂದ್ರದ ಕುರುಡಪದವು ಇವರಿಂದ ಏಕಾದಶಿ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಲಿದೆ. ಅ.19 ರಂದು  ಬೆಳಿಗ್ಗೆ ಪೂಜೆ, ವಿವಿಧ ಸ್ಪಧರ್ೆಗಳು ನಡೆಯಲಿದ್ದು, 12 ಕ್ಕೆ ವಿದ್ಯಾರಂಭ ಕಾರ್ಯಕ್ರಮ, ಮಧ್ಯಾಹ್ನ 1 ರಿಂದ ಅನ್ನ ಸಂತರ್ಪಣೆ, ಅಪರಾಹ್ನ 2.30 ಗೆ ಬೇಕೂರು ಜಿ.ಎಚ್.ಎಸ್ ಶಾಲಾ ಮುಖ್ಯೋಪಾಧ್ಯಾಯ ಉದಯಶಂಕರ್ ಅವರ ಅಧ್ಯಕ್ಷತೆಯಲ್ಲಿ ವೇದಮೂತರ್ಿ ಹರಿನಾರಾಯಣ ಕುಂಬಳೆ ಇವರಿಂದ ಧಾಮರ್ಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30 ಕ್ಕೆ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries