HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಶ್ರೀಭಾರತೀ ವಿದ್ಯಾಪೀಠದಲ್ಲಿ ದಸರಾ ನಾಡಹಬ್ಬ
     ಬದಿಯಡ್ಕ: ದಸರಾ ನಾಡಹಬ್ಬದ ಪ್ರಯುಕ್ತ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ 2 ದಿನಗಳ ಕಾಲ ನಡೆಯುವ ವಿವಿಧ ಸಾಂಸ್ಕೃತಿಕ, ಸಾಹಿತ್ತಿಕ ಸ್ಪಧರ್ೆಗಳು ಗುರುವಾರ ಆರಂಭವಾಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೈ ಬದಿಯಡ್ಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸರಸ್ವತೀಮಂದಿರದಲ್ಲಿ ದಸರಾ ಕಾರ್ಯಕ್ರಮವು ಔಚಿತ್ಯಪೂರ್ಣವಾಗಿ ಆಚರಿಸಲ್ಪಡುವುದು ಸಂತೋಷದಾಯಕ ವಿಚಾರವಾಗಿದೆ. ಪ್ರತಿಭೆಗಳನ್ನು ಗುರುತಿಸಲು ಇಂತಹ ಕಾರ್ಯಕ್ರಮಗಳು ವೇದಿಕೆಯಾಗಿ ಪರಿಣಮಿಸುತ್ತದೆ ಎಂದರು.
ಶಾಲಾ ಆಡಳಿತ ಮಂಡಳಿ ಸದಸ್ಯ ಈಶ್ವರ ಭಟ್ ಹಳೆಮನೆ ಶುಭಹಾರೈಸಿ ಮಾತನಾಡಿ,  ವಿದ್ಯಾಥರ್ಿ ಜೀವನದಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಉಪಯೋಗಿಸುತ್ತಾ ಮುಂದುವರಿಯುವುದು ಭವಿಷ್ಯಕ್ಕೆ ಸಹಕಾರಿ ಎಂದರು. ದಸರಾ ನಾಡಹಬ್ಬದ ಸಂಚಾಲಕಿ ಮಮತಾ ಸಾವಿತ್ರಿ ಮಾತನಾಡಿ 2 ದಿನಗಳ ಕಾಲ ಜರಗುವ ಕಾರ್ಯಕ್ರಮದ ಸಂಪೂರ್ಣ ವಿವರಗಳನ್ನು ತಿಳಿಸಿದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ನವರಾತ್ರಿಯ ಶುಭ ಸಂದರ್ಭದಲ್ಲಿ ದಸರಾ ನಾಡಹಬ್ಬವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸಂವಹನಾ ಕೌಶಲ್ಯ ಅತೀ ಅಗತ್ಯವಾಗಿ ಬೇಕಾಗಿರುವ ಒಂದು ಅಂಶವಾಗಿದೆ. ಚಿಕ್ಕಿಂದಿನಲ್ಲಿಯೇ ಮಕ್ಕಳಿಗೆ ಇಂತಹಕೌಶಲ್ಯವನ್ನು ವೃದ್ಧಿಸಲು ಶಾಲೆಗಳಲ್ಲಿ ವಿವಿಧ ರೀತಿಯ ಸ್ಪಧರ್ೆಗಳನ್ನು ಏರ್ಪಡಿಸಿದಾಗ ಉತ್ಸಾಹದಿಂದ ಭಾಗವಹಿಸುವುದಲ್ಲದೆ ಭಾಷಾಭಿವೃದ್ಧಿಯಾಗುತ್ತದೆ ಎಂದರು.
   * ಒಟ್ಟು 5 ವಿಭಾಗಗಳಲ್ಲಾಗಿ 74 ಸ್ಪಧರ್ೆಗಳಿಗೆ 23 ಜನ ನಿಣರ್ಾಯಕರಾಗಿ ಸಹಕರಿಸುತ್ತಿದ್ದಾರೆ.
   * ಸಪ್ತ ಋಷಿಗಳ ಹೆಸರನ್ನೊಳಗೊಂಡ 7 ವೇದಿಕೆಗಳಲ್ಲಾಗಿ ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿದೆ.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries