HEALTH TIPS

No title

               ಮನ್ ಕಿ ಬಾತ್- ಸದರ್ಾರ್ ಪಟೇಲ್ 'ಮಹಾ ದಾರ್ಶನಿಕ', ಒಗ್ಗಟ್ಟನಿಂದ ಎಲ್ಲರೂ ಮುನ್ನಡೆಯೋಣ: ಪ್ರಧಾನಿ ಮೋದಿ
       ನವದೆಹಲಿ: ಭಾರತದ ಮೊದಲ ಗೃಹ ಮಂತ್ರಿ ಹಾಗೂ ಉಕ್ಕಿನ ಮನುಷ್ಯರೆಂದೇ ಖ್ಯಾತರಾಗಿದ್ದ ಸಕರ್ಾರ್ ಪಟೇಲ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 49ನೇ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಹಾಡಿ ಹೊಗಳಿದ್ದಾರೆ.
   ಸದರ್ಾರ್ ವಲ್ಲಭಬಾಯಿ ಪಟೇಲ್ ಅವರು ಮಹಾ ದಾರ್ಶನಿಕ ವ್ಯಕ್ತಿ. ಸ್ವಾತಂತ್ರ್ಯಕ್ಕಾಗಿ ಎಲ್ಲರನ್ನೂ ಒಗ್ಗೂಡಿಸಿದ್ದರು. ಅ.31 ರಂದು ಪಟೇಲ್ ಅವರ ಜನ್ಮ ದಿನವಾಗಿದ್ದು, ಅಂದು ನಮ್ಮ ದೇಶದ ಯುವಕರು 'ರನ್ ಫಾರ್ ಯುನಿಟಿ'ಯಲ್ಲಿ ಭಾಗಿಯಾಗಬೇಕು. 'ರನ್ ಫಾರ್ ಯುನಿಟಿ'ಯಲ್ಲಿ ಪಾಲ್ಗೊಳ್ಳುವಂತೆ ಪ್ರತೀಯೊಬ್ಬರಿಗೂ ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ.
   ಈ ಬಾರಿ ಪಟೇಲ್ ಅವರ ಜನ್ಮ ದಿನಾಚರಣೆ ಅತ್ಯಂತ ವಿಶೇಷ ದಿನವಾಗಿದೆ. ಪಟೇಲ್ ಅವರ ಜನ್ಮದಿನಾಚರಣೆಯಂದು ನರ್ಮದಾ ನದಿ ಬಳಿ ನಿಮರ್ಾಣಗೊಂಡಿರುವ  ಸ್ಟ್ಯಾಚು ಆಫ್ ಯುನಿಟಿಯನ್ನು ದೇಶಕ್ಕೆ ಸಮಪರ್ಿಸುತ್ತಿದ್ದೇವೆ. ಈ ಪ್ರತಿಮೆ ಅಮೆರಿಕಾದ ಸ್ಟ್ಯಾಚು ಆಫ್ ಲಿಬಟರ್ಿಗಿಂದಲೂ ಎರಡು ಪಟ್ಟು ಎತ್ತರವನ್ನು ಹೊಂದಿದೆ. ಸದರ್ಾರ್ ರಂತೆ ಅವರ ಪ್ರತಿಮೆ ಕೂಡ ಭಾರತದ ಹೆಮ್ಮೆಯಾಗಲಿದೆ ಎಂದು ತಿಳಿಸಿದ್ದಾರೆ.
   ಇದೇ ವೇಳೆ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಅವರ ಸಂದರ್ಶನದ ಕುರಿತಂತೆ ಮಾತನಾಡಿದ ಪ್ರಧಾನಿ ಮೋದಿಯವರು, ವೀರ ಯೋಧರಿಗೆ ಸೆಲ್ಯೂಟ್ ಹೊಡೆದಿದ್ದಾರೆ.
  ಈ ಬಾರಿಯ ನವೆಂಬರ್ 11 ರಂದು ವಿಶೇಷ ದಿನವಾಗಿದೆ. ಅಂದು ಮೊದಲನೇ ವಿಶ್ವ ಯುದ್ಧ ನಡೆದು 100 ವರ್ಷಗಳಾಗುತ್ತವೆ. ನಮ್ಮ ಯೋಧರು ಯುದ್ಧದಲ್ಲಿ ಸಾಕಷ್ಟು ತ್ಯಾಗ ಹಾಗೂ ಬಲಿದಾನ ಮಾಡಿದ್ದರು. ಯುದ್ಧ ನಡೆದಾಗ ನಾವು ಎರಡನೆಯವರಾಗಿರುತ್ತೇವೆಂಬುದನ್ನ ನಮ್ಮ ಯೋಧರು ಇಡೀ ವಿಶ್ವಕ್ಕೆ ತೋರಿಸಿದ್ದರು ಎಂದು ಹೇಳಿದ್ದಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries