HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಕುಂಟಿಕಾನ ಮಠದಲ್ಲಿ ಇಂದು ನವರಾತ್ರಿ ವಿಶೇಷ-ಸನ್ಮಾನ
   ಬದಿಯಡ್ಕ: ನೀಚರ್ಾಲು ಸಮೀಪದ ಕುಂಟಿಕಾನ ಮಠ ಶ್ರೀಶಂಕರನಾರಾಯಣ ಕ್ಷೇತ್ರದಲ್ಲಿ ಅ.10 ರಿಂದ ವಾಷರ್ಿಕ ನವರಾತ್ರಿ ಮಹೋತ್ಸವ ಆರಂಭಗೊಂಡಿದ್ದು, ಇಂದು(ಶನಿವಾರ) ಲಲಿತಾ ಪಂಚಮಿಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
   ಶನಿವಾರ ಬೆಳಿಗ್ಗೆ 8 ರಿಂದ ಮಹಾಪೂಜೆ, 10 ರಿಂದ ಪುಟಾಣಿಗಳಿಂದ ಭಕ್ತಿಗೀತೆ, ಮಧ್ಯಾಹ್ನ 12 ರಿಂದ ಸನ್ಮಾನ ಸಮಾರಂಭ ನಡೆಯಲಿದೆ. ನಾರಂಪಾಡಿ ಶ್ರೀಉಮಾಮಹೇಶ್ವರ ಕ್ಷೇತ್ರದ ಮೊಕ್ತೇಸರ, ನಿವೃತ್ತ ಮುಖ್ಯೋಪಾಧ್ಯಾಯ ಸೀತಾರಾಮ ಕುಂಜತ್ತಾಯ ಅವರ ಉಪಸ್ಥಿತಿಯಲ್ಲಿ ಸಾಧಕಿ, ಪಶುಸಂಗೋಪನೆಯಲ್ಲಿ ಅವಿರತ ಶ್ರಮ ವಹಿಸುತ್ತಿರುವ ಸುಜಾತಾ ಕೆ.ಎಸ್.ಅನಂತಪುರ ಅವರನ್ನು ಗೌರವಾಭಿಮಾನಗಳಿಂದ ಸನ್ಮಾನಿಸಲಾಗುವುದು. ಗ್ರಾ.ಪಂ. ಸದಸ್ಯೆ ಜಯಂತಿ.ಕೆ, ಧಾಮರ್ಿಕ ಮುಂದಾಳು ಶ್ರೀಕೃಷ್ಣ ಭಟ್ ಪುದುಕೋಳಿ, ಶ್ರೀಕ್ಷೇತ್ರದ ಜೀಣರ್ೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು ಉಪಸ್ಥಿತರಿರುವರು. ಮಧ್ಯಾಹ್ನ 1 ರಿಂದ ಪ್ರಸಾದ ಭೋಜನ, ರಾತ್ರಿ 7 ರಿಂದ ಭಜನಾ ಸಂಕೀರ್ತನೆ, 7.30 ರಿಂದ ವಿಶೇಷ ದುಗರ್ಾಪೂಜೆ, ಸಾಮೂಹಿಕ ಪ್ರಾರ್ಥನೆ, ಕಾತರ್ಿಕಪೂಜೆ, ಅನ್ನದಾನಗಳು ನಡೆಯಲಿವೆ.
   ಅ.19 ರಂದು ವಿಜಯದಶಮಿಯಂದು ಬೆಳಿಗ್ಗೆ 7.30 ರಿಂದ ಕದಿರುಪೂಜೆ, ನವಾನ್ನ, ಹೊಸ್ತು, 8 ರಿಂದ ಪೂಜೆ, 10 ರಿಂದ ಕಾಟುಕುಕ್ಕೆಯ ಶ್ರೀಸುಬ್ರಹ್ಮಣ್ಯೇಶ್ವರ ಮಹಿಳಾ ಯಕ್ಷಗಾನ ಬಳಗದವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಮಧ್ಯಾಹ್ನ 12 ರಿಂದ ಮಹಾಪೂಜೆ, ಅನ್ನದಾನಗಳು ನಡೆಯಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries