HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಅ.13 ರಂದು  ಪಡ್ರೆಯಲ್ಲಿ ಯಕ್ಷ ನುಡಿ ಸರಣಿ 
     ಪೆರ್ಲ: ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಇದರ ನೇತೃತ್ವದಲ್ಲಿ ನಡೆಯುತ್ತಿರುವ ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನದ ಏಳನೇ ಕಾರ್ಯಕ್ರಮವು ವಾಣೀನಗರ ಕುತ್ತಾಜೆಯ ಗಣಪತಿ ನಾಯಕ್ ಅವರ ನಿವಾಸ `ಸಾರಸ್ವತ' ದಲ್ಲಿ ಅಕ್ಟೋಬರ್ 13 ರಂದು ಶನಿವಾರ ಮಧ್ಯಾಹ್ನ 1 ರಿಂದ  ನಡೆಯಲಿದೆ.
   ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಕಲಾವಿದ ದಿವಾಣ ಶಿವಶಂಕರ ಭಟ್ ದೀಪಜ್ವಲನಗೊಳಿಸಿ ಉದ್ಘಾಟಿಸುವರು. ಸಿರಿಚಂದನ ಕನ್ನಡಯುವ ಬಳಗದ ಸದಸ್ಯ ಕೀರ್ತನ್ ಕುಮಾರ್ ಸಿ.ಎಚ್. ಕನ್ನಡ ಜಾಗೃತಿ ಉಪನ್ಯಾಸ ನೀಡುವರು. ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನದ ಸಂಚಾಲಕ ನವೀನ ಕುಂಟಾರು ಅಧ್ಯಕ್ಷತೆ ವಹಿಸುವರು. ಬಳಗದ ಮಾರ್ಗದರ್ಶಕ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತವಿಕವಾಗಿ ಮಾತನಾಡುವರು.
  ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನದ ಹಿರಿಯ ಕಲಾವಿದ ದಿವಾಣ ಶಿವಶಂಕರ ಭಟ್ ಅವರ ಮಾರ್ಗದರ್ಶನದಲ್ಲಿ ಸಿರಿ ಚಂದನ ಕನ್ನಡ ಯುವಬಳಗದ ಸದಸ್ಯರಿಂದ `ಕೃಷ್ಣಾಜರ್ುನ ಕಾಳಗ' ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಕಾವ್ಯಶ್ರೀ ಅಜೇರು, ಚೆಂಡೆ ಮತ್ತು ಮದ್ದಳೆಯಲ್ಲಿ ಶ್ರೀಪತಿ ನಾಯಕ್, ಯೋಗೀಶ್ ಕಡಂಬಳಿತ್ತಾಯ ಸಹಕರಿಸುವರು. ಮುಮ್ಮೇಳದಲ್ಲಿ ದಿವಾಕರ ಬಲ್ಲಾಳ್ ಎ.ಬಿ, ಶಶಿಧರ ಕುದಿಂಗಿಲ, ನವೀನ ಕುಂಟಾರು, ಕಾತರ್ಿಕ್ ಪಡ್ರೆ, ಮನೋಜ್ ಎಡನೀರು, ಮಣಿಕಂಠ ಪಾಂಡಿಬಯಲು ಮತ್ತು ಪ್ರಶಾಂತ್ ಪಡ್ರೆ ಪಾತ್ರ ನಿರ್ವಹಿಸುವರು.
   ಬಳಗದ ಜೊತೆ ಕಾರ್ಯದಶರ್ಿ ಸೌಮ್ಯಾ ಪ್ರಸಾದ್ ನಾಯ್ಕಾಪು, ಗಣಪತಿ ನಾಯಕ್, ಸದಸ್ಯರಾದ ಪ್ರದೀಪ್ ಎಡನೀರು, ಸುಜಿತ್ ಉಪ್ಪಳ, ಮುಂತಾದವರು ಉಪಸ್ಥಿತರಿರುವರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries