HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಪಂಜದಲ್ಲಿ ಪಂಜಿನ ಮೆರವಣಿಗೆ
      ಉಪ್ಪಳ:  ಕೇರಳದ ಎಡರಂಗ ಸರಕಾರ ಹಿಂದುಗಳ ಆಚಾರ, ಅನುಷ್ಠಾನಗಳಿಗೆ ಉದ್ದೇಶಪೂರ್ವಕವಾಗಿ ಅಪಚಾರವೆಸಗುತ್ತಿದೆ. ನಾಸ್ತಿಕ ಮಾಕ್ಸರ್್ವಾದಿಗಳು ಇಂದು ನಾಸ್ತಿಕರಾಗಿ ಪರಿವರ್ತನೆಯಾಗುತ್ತಿರುವುದು ಅದು ಭಾರತದ ಮಣ್ಣಿನ ಗುಣ. ದೇಶದಲ್ಲಿ  ಭೂಮಿ, ನದಿ ,ಚರಾಚರ ತಾಯಿ ರೂಪದಲ್ಲಿ ಕಂಡವರು ಹಿಂದುಗಳು ದೇವತೆಗಳ ರೂಪದಲ್ಲಿ ಸ್ತ್ರೀ ದೇವತೆಗಳನ್ನೇ   ಪೂಜಿಸುವ ಹಿಂದೂಗಳಿಗೆ ಸಮಾನತೆಯ ಪಾಠ ನಾಸ್ತಿಕ ಎಡರಂಗ ಕಲಿಸಬೇಕಾದ ಅಗತ್ಯವಿಲ್ಲ ಎಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರ. ಕಾರ್ಯದಶರ್ಿ ಆದಶರ್್ ಬಿ.ಎಂ. ಹೇಳಿದರು.
   ಮಂಗಲ್ಪಾಡಿ ವ್ಯಾಪ್ತಿಯ ಪಂಜದಲ್ಲಿ ಭಾನುವಾರ ನಡೆದ ಅಯ್ಯಪ್ಪ ಭಕ್ತರ ಪಂಜಿನ ಮೆರವಣಿಗೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
     ಶಬರಿಮಲೆಗೆ ವಿಚಾರದಲ್ಲಿ ಧಾಮರ್ಿಕತೆಗಿಂತ ಹಣ ಸಂಪದನೆಯೇ ಎಡರಂಗ ಸರಕಾರದ ಗುರಿ ಎಂದು ಉಪಸ್ಥಿತರಿದ್ದ ನ್ಯಾಯವಾದಿ. ನವೀನರಾಜ್ ಸರಕಾರದ ಕ್ರಮ ಖಂಡಿಸಿದರು. .
   ಪಂಜ ಅಯ್ಯಪಕ್ಷೇತ್ರದ  ಅಧ್ಯಕ್ಷ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಗುರುಸ್ವಾಮಿ ಈಶ್ವರ ಸ್ವಾಮಿ, ಮುಖಂಡರಾದ ಸುರೇಶ್ ಪರಂಕಿಲ, ಕಿಶೋರ್ ಭಗವತಿ, ಬಾಬು ಎಮ್, ಸತೀಶ್ ಒಡ್ಡಂಬೆಟ್ಟು, ಹರಿನಾಥ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ಸ್ವಾಗತಿಸಿ, ಹೇಮರಾಜ್ ಶೆಟ್ಟಿ ವಂದಿಸಿದರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries