HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಭಯಾಂತಂಕಕ್ಕೆ ಕಾರಣವಾದ ಕಗ್ಗಲ್ಲು ಕೋರೆ ನಿಯಂತ್ರಣಕ್ಕೆ ತೀಮರ್ಾನ-
   ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಪನೆಯಾಲ ಬಳಿಯ ದೊಂಪತ್ತಡ್ಕದಲ್ಲಿ ನಾಗರಿಕರ ತೀವ್ರ ಭಯಾತಂಕಕ್ಕೆ ಕಾರಣವಾಗಿದ್ದ ಕಗ್ಗಲ್ಲು ಕೋರೆಯ ಪರವಾನಿಗೆ ರದ್ದತಿಯ ಮೂಲಕ ನಿಯಂತ್ರಣಕ್ಕೆ ಕೊನೆಗೂ ಗ್ರಾ.ಪಂ. ಸವರ್ಾನುಮತದ ನಿರ್ಣಯ ಕೈಗೊಳ್ಳುವ ಮೂಲಕ ಜನಪರ ಕಾಳಜಿ ತೋರ್ಪಡಿಸಿದ್ದು ಶ್ಲಾಘನೆಗೊಳಗಾಗಿದೆ.
   ಬೆಳ್ಳೂರು,ಎಣ್ಮಕಜೆ, ಕುಂಬ್ಡಾಜೆ ಹಾಗೂ ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ವ್ಯಾಪಕ ಸಮಸ್ಯೆಗೆ ಕಾರಣವಾದ ದೊಂಪತ್ತಡ್ಕದಲ್ಲಿ ಕಾಯರ್ಾಚರಿಸುವ ಕಗ್ಗಲ್ಲುಕೋರೆಯೊಂದು ಹಲವು ವರ್ಷಗಳಿಂದ ಮುಲಾಜಿಲ್ಲದೆ ನಡೆಯುತ್ತಿತ್ತು. ಆದರೆ ಅಲ್ಲಿಯ ಭೀಕರ ಸ್ವರೂಪದ ಸ್ಪೋಟಗಳು, ದಿನನಿತ್ಯ ಸಂಚರಿಸುವ ನೂರಾರು ಲಾರಿ, ತತ್ಪರಿಣಾಮವಾದ ಧೂಳು, ರಸ್ತೆಹಾನಿ ಮೊದಲಾದ ಕಾರಣಗಳನ್ನು ಗುರುತಿಸಿ, ಈ ಹಿಂದೆ ಎಂಡೋಸಲ್ಫಾನ್ ಸಮಸ್ಯೆಯನ್ನು ಜಗತ್ತಿಗೆ ತೆರೆದಿಟ್ಟ ಪ್ರಗತಿಪರ ಸಮಾಜಸೇವಕ ಡಾ.ಮೋಹನ್ ಕುಮಾರ್ ವೈ.ಎಸ್ ಅವರ ನೇತೃತ್ವದಲ್ಲಿ ನಾಗರಿಕರು ಒಗ್ಗಟ್ಟಾಗಿ ಸರಕಾರದ ವಿವಿಧ ವಲಯಗಳ ಉನ್ನತಾಧಿಕಾರಿಗಳಿಗೆ ಕೋರೆ ನಿಯಂತ್ರಿಸುವಂತೆ ದೂರು ನೀಡಿದ್ದರು. ಆದರೆ ಅಗತ್ಯದ ಯಾವುದೇ ಕ್ರಮಗಳನ್ನು ನಡೆಸಿದ ಬಗ್ಗೆ ಈವರೆಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
   ಈ ಮಧ್ಯೆ ಕಗ್ಗಲ್ಲು ಕೋರೆ ಇರುವ ಬೆಳ್ಳೂರು ಗ್ರಾ.ಪಂ. ಆಡಳಿತ ಸಮಿತಿ ಮತ್ತು ಸದಸ್ಯರು ಬುಧವಾರ ಗ್ರಾ.ಪಂ.ಕಚೇರಿಯಲ್ಲಿ ಸೇರಿದ ತುತರ್ು ಸಭೆಯಲ್ಲಿ ಕಗ್ಗಲ್ಲು ಕೋರೆಯ ದುಷ್ಪರಿಣಾಮದ ಬಗ್ಗೆ ಕಳಕಳಿ ವ್ಯಕ್ತಪಡಿಸಿ ಕೋರೆಗೆ ನೀಡಿರುವ ಪರವಾನಿಗೆ(ಎನ್ಒಸಿ) ರದ್ದುಪಡಿಸಲು ಸವರ್ಾನುಮತದ ತೀಮರ್ಾನ ಕೈಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries