ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 09, 2018
ಬೇವೂರಿನಲ್ಲಿ ಪ್ರೊಫೆಷನಲ್ ನಾಟಕ ಸ್ಪ`ರ್ೆ
ಕಾಸರಗೋಡು: ಉದುಮ ಸಮೀಪದ ಬೇವೂರು ಎಂಬಲ್ಲಿರುವ ಸೌಹಾರ್ದ ವಾಚನಾಲಯ ಮತ್ತು ಗ್ರಂಥಾಲಯದ 15ನೇ ವಾಷರ್ಿಕೋತ್ಸವದ ಅಂಗವಾಗಿ ಡಿಸೆಂಬರ್ 4ರಿಂದ 9ರ ವರೆಗೆ ಬೇವೂರಿನ ಸೌಹಾರ್ದ ತೆರೆದ ಸಭಾಂಗಣದಲ್ಲಿ ಪ್ರಥಮ ಕೆ.ಟಿ.ಮುಹಮ್ಮದ್ ಸ್ಮಾರಕ ರಾಜ್ಯ ಪ್ರೊಫೆಷನಲ್ ನಾಟಕ ಸ್ಪಧರ್ೆಯು ನಡೆಯಲಿದೆ.
ಇದರ ಅಂಗವಾಗಿ ಹೊರತರಲಾದ ಲಾಂಛನವನ್ನು ಕಾಸರಗೋಡು ಪ್ರೆಸ್ಕ್ಲಬ್ನಲ್ಲಿ ಜರಗಿದ ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಬಿಡುಗಡೆಗೊಳಿಸಿದರು. ಖ್ಯಾತ ಡಿಸೈನರ್ ರಚನ ಅಬ್ಬಾಸ್ ಲಾಂಛನಕ್ಕೆ ರೂಪು ನೀಡಿದ್ದರು. ನಾಟಕ ಸ್ಪಧರ್ೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಸಮ್ಮಾನಿಸಲಾಗುವುದು. ಜೊತೆಗೆ ಪುಸ್ತಕ ಬಿಡುಗಡೆ, ಜಿಲ್ಲಾ ಮಟ್ಟದ ರಂಗಗೀತೆ ಗಾಯನ ಸ್ಪಧರ್ೆ, ಜಿಲ್ಲೆಯ ನಾಟಕ ಕಾರ್ಯಕರ್ತರ ಒಕ್ಕೂಟ ಮತ್ತು ಉಪನ್ಯಾಸಗಳು ನಡೆಯಲಿದೆಯೆಂದು ಸುದ್ದಿಗೋಷ್ಠಿಯಲ್ಲಿ ಸಂಬಂಧಪಟ್ಟವರು ಪ್ರಕಟಿಸಿದರು.
ಒಟ್ಟು 6 ನಾಟಕ ತಂಡಗಳು ಈ ಸ್ಪಧರ್ೆಯಲ್ಲಿ ಪಾಲ್ಗೊಳ್ಳಲಿವೆ. ಪ್ರತೀ ದಿನ ರಾತ್ರಿ 7.30ಕ್ಕೆ ನಾಟಕ ಆರಂಭಗೊಳ್ಳಲಿದೆ. ಸ್ಪಧರ್ೆಯಲ್ಲಿ ವಿಜೇತರಾಗುವ ಪ್ರಥಮ ತಂಡಕ್ಕೆ 10,000ರೂ. ಹಾಗೂ ದ್ವಿತೀಯ ತಂಡಕ್ಕೆ 7,500ರೂ. ಗಳನ್ನು ನಗದು ಬಹುಮಾನವಾಗಿ ನೀಡಲಾಗುವುದು. ಪ್ರತಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ವಿ.ಕುಂಞಿರಾಮನ್, ಕೆ.ವಿಜಯಕುಮಾರ್, ಅಬ್ಬಾಸ್, ಕೆ.ರಘುನಾಥ್, ಟಿ.ಕೆ.ಅಹಮ್ಮದ್ ಶಾಫಿ ಉಪಸ್ಥಿತರಿದ್ದರು.




