HEALTH TIPS

ಅಪಮೌಲ್ಯೀಕರಣದಿಂದ ಹೆಚ್ಚು ಸಂಕಷ್ಟಕ್ಕೊಳಗಾದವರು ಕೃಷಿಕರು-ಕೇಂದ್ರ ಆಥರ್ಿಕ ಸ್ಥಾಯೀ ಸಮಿತಿ ವರದಿ

             
      ನವದೆಹಲಿ: ನಗದು ಅಪಮೌಲ್ಯೀಕರಣದ ಕಾರಣದಿಂದ ರಾಷ್ಟ್ರದಲ್ಲಿ ಎಲ್ಲರಿಂದಲೂ ಹೆಚ್ಚು ರೈತರು ಸಂಕಷ್ಟ ಅನುಭವಿಸಿದರು ಎಂಬ ಸತ್ಯವನ್ನು ಇದೇ ಮೊದಲ ಬಾರಿಗೆ ಕೇಂದ್ರ ಕೃಷಿ ಇಲಾಖೆ ಹೇಳಿಕೆ ನೀಡಿದೆ.
        ಪಾಲರ್ಿಮೆಮಟ್ ಆಥರ್ಿಕ ಸ್ಥಾಯೀ ಸಮಿತಿಯ ಇಂದು ನಡೆದ ಸಭೆಯಲ್ಲಿ ಕೃಷಿಕರ ಮೇಲಾದ ಭೀಕರ ಪರಿಣಾಮದ ಬಗ್ಗೆ ಸಮಗ್ರ ವರದಿ ಸಲ್ಲಿಸಿತು. ನೋಟು ನಿಷೇಧದ ಕಾರಣ ಉಂಟಾದ ಹಣದ ಲಭ್ಯತೆಯ ಕೊರತೆಯಿಂದ ರಾಷ್ಟ್ರದ ಲಕ್ಷೊಪಲಕ್ಷ ಕೃಷಿಕರು ಕೃಷಿ ಕೊಯ್ಲು ಋತುವಿನಲ್ಲಿ ಗೊಬ್ಬರ ಸಹಿತ ಮೂಲ ಸೌಕರ್ಯಗಳನ್ನು ಒದಗಿಸಲು ಅಸಾಧ್ಯರಾಗಿ ಕಂಗೆಟ್ಟ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
      ನಗದು ಅಪಮೌಲ್ಯೀಕರಣದ ಸಂದರ್ಭ ಬೀಜ ಖರೀಧಿಸಲು, ಬೆಳೆಗೆ ಅಗತ್ಯದ ವ್ಯವಸ್ಥೆ ಕಲ್ಪಿಸಲು ರ್ಯತರು ತಿಣುಕಾಡಿದ್ದರು. ತಮ್ಮ ಬಳಿಯಿದ್ದ ಹಣವನ್ನು ಬಳಸಲಾರದಾಗಿದ್ದರು. ಇದರಿಂದ ಸಂಕಷ್ಟಗಳ ಸರಮಾಲೆ ಸೃಷ್ಟಿಯಾಗಿತ್ತೆಮದು ಕೇಂದ್ರ ಕೃಷಿ ಇಲಾಖೆಯ ಸ್ಥಾಯೀ ಸಮಿತಿಯ ವರದಿ ಬಹಿರಂಗಪಡಿಸಿದೆ. ನೇಶನಲ್ ಸಿಡ್ ಕಾಪರ್ೋರೇಶನ್ನ 1.38 ಲಕ್ಷ ಬೀಜಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ ಈ ಸಂದರ್ಭ ನಿಷೇದಗೊಳಿಸಲಾದ ನೋಟುಗಳನ್ನು ಬಳಸಿ ಬೀಜಗಳನ್ನು ಖರೀದಿಸಲು ಅವಕಾಶವೊಂದನ್ನು ನೀಡಿದರೂ ಫಲಪ್ರದವಾಗಲಿಲ್ಲ ಎಮದು ವರದಿ ಉಲ್ಲೇಖಿಸಿದೆ.
       ಮಾಜಿ ಪ್ರಧಾನಿ ಮಹಮೋಹನ್ ಸಿಂಗ್ ಸಹಿತ 31 ಸದಸ್ಯರು ಕೇಂದ್ರ ಪಾಲರ್ಿಮೆಂಟ್ ಹಣಕಾಸು ಸ್ಥಾಯೀ ಸಮಿತಿಯಲ್ಲಿದ್ದು ಅವರು ಸಮಪಿಸಿದ ವರದಿ ಇದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries