HEALTH TIPS

ಪೋಲಿಸರಿಂದ ಮಗದೊಂದು ಪ್ರಕರಣ ದಾಖಲು

             
            ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ಗೆ ಜೈಲುವಾಸ
   ಕುಂಬಳೆ: ಶಬರಿಮಲೆಯಲ್ಲಿ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಿದ ಆರೋಪದಡಿ ಬಂಧನಕ್ಕೊಳಗಾದ ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ಅವರ ಮೇಲೆ ಮಗದೊಂದು ಆರೋಪ ಹೊರಿಸಲಾಗಿದ್ದು, ಪೋಲಿಸರು ಕೇಸು ದಾಖಲಿಸಿಕೊಂಡಿದ್ದಾರೆ. ಚಿತ್ತಿರಾ ಆಟ್ ವಿಶೇಷ ಪೂಜೆಗೆಂದು ಕ್ಷೇತ್ರಕ್ಕೆ ಆಗಮಿಸಿದ್ದ 52 ವರ್ಷ ವಯಸ್ಸಿನ ಭಕ್ತೆಯನ್ನು ಶಬರಿಮಲೆ ಕ್ಷೇತ್ರ ಪ್ರವೇಶಿಸದಂತೆ ಕೆ.ಸುರೇಂದ್ರನ್ ತಡೆದಿದ್ದು, ಇದರಡಿ ಭಕ್ತೆಯ ವೈಯಕ್ತಿಕ ಸ್ವಾತಂತ್ರ್ಯ ಹರಣ ಎಂಬ ಕೇಸು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 120(ಬಿ) ಪ್ರಕಾರ ಜಾಮೀನು ರಹಿತ ಕೇಸನ್ನು ಕೆ.ಸುರೇಂದ್ರನ್ ಮೇಲೆ ಹೊರಿಸಲಾಗಿದೆ. ಶಬರಿಮಲೆಯಲ್ಲಿ ಸಂಘರ್ಷ ಸೃಷ್ಠಿಸಲು ಸುರೇಂದ್ರನ್ ಶ್ರಮಿಸಿದ್ದರು ಎನ್ನುವ ಆರೋಪದಡಿ ದೂರನ್ನು ದಾಖಲಿಸಲಾಗಿದ್ದು, ಒಟ್ಟು 12 ಮಂದಿ ಯನ್ನು ನ.18 ರಂದು ನಡೆದ ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬುಧವಾರದಂದು ಸ್ಥಳೀಯ ರಾನ್ನಿ ನ್ಯಾಯಾಲಯದಲ್ಲಿ ಸುರೇಂದ್ರನ್ ಮೇಲೆ ಕೊಲೆ ಪ್ರಯತ್ನವೆಂಬ ಮೂಕದ್ದಮೆ ಹೊರಿಸಲಾಗಿದೆ. 
    ಶಬರಿಮಲೆಯಲ್ಲಿ ನಡೆದ ಚಿತ್ತಿರಾ ಆಟ್ ವಿಶೇಷ ಪೂಜೆಯಲ್ಲಿ ಭಾಗವಹಿಸಿ ತನ್ನ ಎಳೆ ಮಗುವಿನ ಅನ್ನಪ್ರಾಶನ ಮಾಡಿಸಲು ಆಗಮಿಸಿದ್ದ 52 ವರ್ಷದ ತ್ರಿಶೂರು ನಿವಾಸಿ ಮಹಿಳೆ ಲಲಿತಾ ಎಂಬಾಕೆಯನ್ನು ತಡೆದು ನಿಲ್ಲಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಸ್ತ್ರೀ ಸ್ವಾತಂತ್ರ್ಯವನ್ನು ಅವಮಾನಿಸಲಾಗಿದ್ದು, ಹಲ್ಲೆಗೆ ಶ್ರಮ ಸಹಿತ ಸಂಘರ್ಷದ ವಾತಾವರಣ ಸೃಷ್ಠಿಸುವ ಹುನ್ನಾರವನ್ನು ಕೆ.ಸುರೇಂದ್ರನ್ ಎಸಗಿದ್ದಾರೆ ಎಂಬ ದೋಷಾರೋಪವನ್ನು ಪೋಲಿಸರು ಸ್ಥಳೀಯ ನ್ಯಾಯಾಲಯದಲ್ಲಿ ಹೂಡಿದ್ದಾರೆ.
          ಸುರೇಂದ್ರನ್ ಸಹಿತ ಆರ್ಎಸ್ಎಸ್ ನೇತಾರ ವತ್ಸನ್ ತಿಲ್ಲಂಗೇರಿ, ಬಿಜೆಪಿ ನಾಯಕ ವಿ.ವಿ.ರಾಜೇಶ್, ಯುವಮೋಚರ್ಾ ಅಧ್ಯಕ್ಷ ಪ್ರಕಾಶ್ ಬಾಬುರವರ ಮೇಲೂ ಕೇಸು ದಾಖಲಿಸಲಾಗಿದೆ. ಸಂಘರ್ಷ ಸೃಷ್ಠಿಗೆ ಹುನ್ನಾರವೆಂಬ ಆರೋಪದಡಿ ಐಪಿಸಿ 120(ಬಿ) ನಿಯಮದಲ್ಲಿ ಆರೋಪಿಗಳಿಗೆ ಜಾಮೀನು ರಹಿತ ವಾರೆಂಟ್ ಜ್ಯಾರಿಗೊಳಿಸಲಾಗಿದೆ. ಇದೇ ವೇಳೆ ಬುಧವಾರದಂದು ಸ್ಥಳೀಯ ಮುನ್ಸೀಫ್ ನ್ಯಾಯಾಲಯವು ಷರತ್ತು ಬದ್ಧ ಜಾಮೀನಿನ ಮೂಲಕ ಜೈಲು ಸೇರಿದ್ದ ಸುರೇಂದ್ರನ್ ಸಹಿತ 69 ಮಂದಿಯನ್ನು ಬಿಡುಗಡೆಗೊಳಿಸಲಾಗಿತ್ತು.  ಎರಡು ವಾರಗಳ ಷರದ್ದು ಬದ್ಧ ಜಾಮೀನು, ಸಹಿತ 20 ಸಾವಿರ ರೂ. ದಂಡ ವಿಧಿಸಲಾಗಿದೆ. ಎರಡು ತಿಂಗಳ ಕಾಲ ಆರೋಪಿಗಳು ರಾನ್ನಿ ತಾಲೂಕಿಗೆ ಪ್ರವೇಶಿಸಬಾರದು ಎಂದು ಹೇಳಲಾಗಿದೆ. ಕಣ್ಣೂರಿನ ಪ್ರಥಮ ದಜರ್ೆ ನ್ಯಾಯಾಲಯದಲ್ಲಿ ಸುರೇಂದ್ರನ್ ವಿರುದ್ಧ ಅರೆಸ್ಟ್ ವಾರೆಂಟ್ ಇರುವ ಕಾರಣ ಸುರೇಂದ್ರನ್ ಬಿಡುಗಡೆ ಸಾಧ್ಯವಿಲ್ಲ ಎನ್ನಲಾಗಿದೆ. ಕಣ್ಣೂರಿನಲ್ಲಿ ಪೋಲಿಸ್ ಅಧಿಕಾರಿಗಳನ್ನು ಬೆದರಿಸಿದ ಪ್ರಕರಣದಲ್ಲಿ ಈ ಹಿಂದೆ ಸುರೇಂದ್ರನ್ ಮೇಲೆ ದೂರು ದಾಖಲಾಗಿತ್ತು. ಪ್ರಸ್ತುತ ಕೊಟ್ಟರಕ್ಕರ ಸಬ್ ಜೈಲಿನಲ್ಲಿರುವ ಸುರೇಂದ್ರನ್ ಅವರನ್ನು ನ.26 ರಂದು ನ್ಯಾಯಾಲಯದಲ್ಲಿ ಹಾಜರುಪಡಿಸಬೇಕೆಂದು ಕಣ್ಣೂರು ನ್ಯಾಯಾಲಯ ಆದೇಶಿಸಿದೆ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries