ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ 2019 ಫೆಬ್ರವರಿ 18ರಿಂದ 24ರ ವರೆಗೆ ಶ್ರೌತಯಾಗಗಳಲ್ಲಿ ಅತಿ ವಿಶಿಷ್ಟವಾದ ವಿಶ್ವಜಿತ್ ಅತಿರಾತ್ರ ಸೋಮಯಾಗವು ನಡೆಯಲಿದೆ. ಇದರ ಪೂರ್ವಭಾವಿಯಾಗಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಅಭಿಯಾನದ ರಥಯಾತ್ರೆಯು ಶ್ರೀಗಳ ಮಾರ್ಗದರ್ಶನದಲ್ಲಿ, ವೇದಮೂತರ್ಿ ಹರಿನಾರಾಯಣ ಮಯ್ಯ ಕುಂಬಳೆ ಇವರ ಪೌರೋಹಿತ್ಯದಲ್ಲಿ ಕಾಸರಗೋಡು ಜಿಲ್ಲೆಯ ಪ್ರಮುಖ ಶ್ರದ್ಧಾಕೇಂದ್ರಗಳಲ್ಲಿ ಸಂಚರಿಸುತ್ತಿದೆ. ಪ್ರಸ್ತುತ ಮೀಂಜ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿನಿಂದ(ನ.21) 30 ರವರೆಗೆ ವಿವಿಧ ಕೇಂದ್ರಗಳಲ್ಲಿ ಪ್ರತಿದಿನ ಸಂಜೆ 6 ರಿಂದ 7.30 ರ ವರೆಗೆ ಅಭಿಯಾನ ನಡೆಯಲಿದೆ.
ಇಂದು ಸಂಜೆ ಬಾಳ್ಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರ, 22 ರಂದು ಗುರುವಾರ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, 23ರಂದು ಶುಕ್ರವಾರ ಚಿನಾಲ ಶ್ರೀ ಶಾಸ್ತಾ ಅಯ್ಯಪ್ಪ ಭಜನಾ ಮಂದಿರ, 24 ರಂದು ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರ, 25 ರಂದು ಭಾನುವಾರ ಬೆಜ್ಜ ಶ್ರೀ ಧೂಮಾವತಿ ದೈವಸ್ಥಾನ ವಠಾರ, 26 ರಂದು ಸೋಮವಾರ ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರ, 27 ರಂದು ಕುದ್ದುಪದವು ಶ್ರೀ ಕೊರತಿ ಗುಳಿಗ ದೈವಕ್ಷೇತ್ರ, 28 ರಂದು ಕಡಂಬಾರು ಶ್ರೀ ವಿಷ್ಣುಮೂತರ್ಿ ದೇವಸ್ಥಾನ, 29 ರಂದು ಕಳಿಯೂರು ಶ್ರೀ ರಕ್ತೇಶ್ವರಿ ದೈವಕ್ಷೇತ್ರ, 30 ರಂದು ಮಜಿಬೈಲು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಅಭಿಯಾನದ ರಥವು ಶ್ರೀಮಹಾವಿಷ್ಣು ದೇವರ ವಿಗ್ರಹದೊಂದಿಗೆ ಆಗಮಿಸಲಿದ್ದು ಆ ಸಂದರ್ಭದಲ್ಲಿ ಭಜನೆ, ಸಾಮೂಹಿಕ ಶ್ರೀವಿಷ್ಣುಸಹಸ್ರನಾಮ ಪಾರಾಯಣ, ಸತ್ಸಂಗ ನಡೆಯಲಿದೆ. ಭಕ್ತಾದಿಗಳು ಕಾರ್ಯಕ್ರಮದ ಪೂರ್ಣಯಶಸ್ಸಿಗೆ ಸಹಕರಿಸಿ ಯಜ್ಞೇಶ್ವರನಾದ ಶ್ರೀಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಬೇಕಾಗಿ ವಿಷ್ಣು ಸಹಸ್ರನಾಮ ಅಭಿಯಾನದ ಸಂಘಟಕರು ವಿನಂತಿಸಿದ್ದಾರೆ.




