HEALTH TIPS

ಮಜೀರ್ಪಳ್ಳದಲ್ಲಿ ಪ್ರತಿಭಟನೆ

ಮಂಜೇಶ್ವರ: ಹಿಂದೂ ಧಾಮರ್ಿಕ ಆಚಾರ ಸಂರಕ್ಷಣೆ ಹಿಂದುಗಳ ಅದ್ಯ ಕರ್ತವ್ಯ. ಹಿಂದುಗಳನ್ನು ರಾಜ್ಯ ಸರಕಾರ ಪೊಲೀಸ್ ಬಲದಿಂದ ಮಟ್ಟಹಾಕಲು ಉದ್ದೇಶಿಸಿದೆ. ಅದು ಕಮ್ಯುನಿಸ್ಟ್ರ ಹಗಲು ಕನಸು ಆಗಲಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರ. ಕಾರ್ಯದಶರ್ಿ ಆದಶರ್್ ಬಿಎಂ ಹೇಳಿದರು. ವಕರ್ಾಡಿ ಬಿಜೆಪಿ ಪಂಚಯತ್ ಸಮಿತಿ ಕೆ.ಸುರೇಂದ್ರನ್ ಬಂಧನ ವಿರೋಧಿಸಿ ಸುಂಕದಕಟ್ಟೆಯಿಂದ ಮಾಜೀರ್ಪಳ್ಳದವರೆಗೆ ಶನಿವಾರ ನಡೆಸಿದ ಪ್ರತಿಭಾಟನೆ ಮೆರವಣಿಗೆ ಉದ್ದೇಶಿಸಿ ಅವರು ಮಾತನಾಡಿದರು. ಕಮ್ಯೂನಿಸ್ಟ್ರು ಸೆದೆಬಡಿದಷ್ಟು ಹಿಂದುಗಳು ಕೇರಳದಲ್ಲಿ ಒಗ್ಗಟ್ಟಾಗಿ ಎಡರಂಗದ ನಾಶಕ್ಕೆ ಮುನ್ನುಡಿ ಬರೆಯಲಿವೆ, ನಕಲಿ ದೂರುಗಳಿಗೆ ಹೆದರಿ ಹಿಂದುಗಳು ಭಯದಿಂದ ಮನೆಯಲ್ಲಿ ಅವಿತರರಲಾಗದು. ಗ್ರಾಮ ಗ್ರಾಮ ಗಳಲ್ಲಿ ಎಡರಂಗ ಹಾಗೂ ಕಾಂಗ್ರೆಸ್ ನ ದ್ವಿಮುಖ ನೀತಿ ಅನಾವರಣ ಮಾಡಲಿದ್ದೇವೆ. ವಕರ್ಾಡಿಯಲ್ಲಿ ಎಡರಂಗ ಮತ್ತು ಐಕ್ಯರಂಗ ಒಂದೇ ನಾಣ್ಯದ ಎರಡು ಮುಖಗಳು ಎಂದು ಅವರು ತಿಳಿಸಿದರು. ಚಂದ್ರಶೇಖರ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ. ನವೀನ್ ರಾಜ್ ಉದ್ಘಾಟಿಸಿ ಮಾತನಾಡಿ, ಕೇರಳ ಸರಕಾರ ನಕಲಿ ದೂರು ದಾಖಲಿಸಿ ಹಿಂದೂಗಳನ್ನು ಬಂದಿಸುವ ಕ್ರಮ ಖಂಡನೀಯ ಎಂದು ಹೇಳುದರು. ಮುಖಂಡರಾದ ತಾಮಾರ್ ಧೂಮಪ್ಪ ಶೆಟ್ಟಿ, ಸದಾಶಿವ ಮಂಟಮೆ, ಸದಾಶಿವ ವಕರ್ಾಡಿ, ಆನಂದ ತಚ್ಚಿರೆ, ಪ್ರಜ್ಞೆವಿತ್ ಶೆಟ್ಟಿ, ವಸಂತ್, ವಿಜಯ್ ಮೊದಲಾದವರು ಉಪಸ್ಥಿತರಿದ್ದರು. ಸಂತೋಷ್ ದೈಗೊಳಿ ಸ್ವಾಗತಿಸಿ, ಜಗದೀಶ್ ಚೆಂಡೆಲ್ ವಂದಿಸಿದರು. ಪ್ರತಿಭಟನಾ ಮೆರವಣಿಗೆ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries