HEALTH TIPS

ಬದಿಯಡ್ಕದಲ್ಲಿ ಜನೌಷಧ ಕೇಂದ್ರಕ್ಕೆ ಶುಭಾರಂಭ ಜನಸಾಮಾನ್ಯರ ಪ್ರಗತಿಗೆ ವಿವಿಧ ಜನಪರ ಯೋಜನೆಗಳ ಮೂಲಕ ಕೇಂದ್ರ ಸರಕಾರ ಜನರೆಡೆಗೆ ದಾಪುಗಾಲು-ಜನ ಬೆಂಬಲ ಅಗತ್ಯ-ನ್ಯಾಯವಾದಿ.ಕೆ.ಶ್ರೀಕಾಂತ್

           
       ಬದಿಯಡ್ಕ: ಪ್ರಧಾನಿ ನರೇಂದ್ರಮೋದಿಯವರ ಜನಪರ ಯೋಜನೆಯಲ್ಲೊಂದಾದ ಜನೌಷಧಿ ಕೇಂದ್ರಗಳು ಬಡಜನತೆಯ ಆಶಾಕಿರಣವಾಗಿ ದೇಶದಾದ್ಯಂತ ಸೇವೆ ನೀಡುತ್ತಿದೆ. ಇದೀಗ ಬದಿಯಡ್ಕದಲ್ಲೂ ಆರಂಭವಾಗಿದ್ದು, ಇದರ ಪ್ರಯೋಜನ ಜನತೆಗೆ ಲಭಿಸುವಂತಾಗಲಿ ಎಂದು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು.
ಅವರು ಗುರುವಾರ ಬದಿಯಡ್ಕದಲ್ಲಿ ಆರಂಭವಾದ ಜಿಲ್ಲೆಯಲ್ಲಿ ಎರಡನೇ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
  ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುವಲ್ಲಿ ಕೇಂದ್ರ ಸರಕಾರವು ವಿವಿಧ ಯೋಜನೆಗಳನ್ನು ಆವಿಷ್ಕರಿಸುತ್ತಾ ಮುಂದುವರಿಯುತ್ತಿದ್ದು, ಜನರಿಗೋಸ್ಕರ ಇರುವ ಜನಪರ ಯೋಜನೆಗಳಿಗೆ ಸಾರ್ವಜನಿಕರ ಬೆಂಬಲ ಸದಾ ಅಗತ್ಯ. ದೇಶದ ಬಡಜನತೆಯ ಅತ್ಯಗತ್ಯಗಳನ್ನು ಮುಂದಿಟ್ಟು ಕೇಂದ್ರ ಸರಕಾರದ ಪ್ರತಿಯೊಂದು ಯೋಜನೆಯು ಜಾರಿಗೊಳ್ಳುತ್ತಿದೆ. ಎಲ್ಲರಿಗೂ ಮನೆಯೆಂಬ ಪ್ರಧಾನಮಂತ್ರಿ ಆವಾಸ್ ಯೋಜನೆ ಕೇರಳದಲ್ಲಿ ಲೈಫ್ ಹೆಸರಿನಲ್ಲಿ ಕಾರ್ಯಗತಗೊಳ್ಳುತ್ತಿದೆ. ದೇಶದ ಎಲ್ಲರ ಕೈಗೆಟಗುವ ವಿಮಾ ಯೋಜನೆಯಾ ಪ್ರಧಾನಮಂತ್ರಿ ಸುರಕ್ಷಾಭಿಮಾ ಯೋಜನೆ ಜನಮನ್ನಣೆ ಪಡೆದಿದೆ. ಅಟಲ್ ಪಿಂಚಣಿ ಯೋಜನೆ, ಭೇಟಿ ಬಚಾವೋ ಭೇಟಿ ಪಡಾವೋ, ಸುಕನ್ಯಾ ಸಮೃದ್ಧಿ, ವಿದ್ಯಾಶ್ರೀ ಯೋಜನೆಯ ಮೂಲಕ ಉನ್ನತ ವಿದ್ಯಾಭ್ಯಾಸಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಹಾಗೂ ಇನ್ನಿತರ ಅನೇಕ ಜನಪರ ಯೋಜನೆಗಳನ್ನು ನರೇಂದ್ರ ಮೋದಿಯರ ನೇತೃತ್ವದಲ್ಲಿ ಜಾರಿಗೊಳಿಸಲಾಗಿದೆ. ಇದೀಗ ಕಡಿಮೆದರದಲ್ಲಿ ಔಷಧಿಗಳು ಲಭಿಸಬೇಕೆನ್ನುವ ಉದ್ದೇಶವನ್ನು ಮುಂದಿಟ್ಟು ದೇಶಾದ್ಯಂತ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು.
ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಆರೋಗ್ಯದ ಕುರಿತು ಜನರು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾದ ಅನಿವಾರ್ಯತೆ ಇಂದು ನಮ್ಮ ಮುಂದಿದೆ. ನಿಯಮಿತವಾದ ಆಹಾರದ ಬಳಕೆ, ವ್ಯಾಯಾಮದ ಕೊರೆತೆಯಿಂದ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುತ್ತಿದೆ. ದೈನಂದಿನ ಆಹಾರವನ್ನು ಗಮನದಲ್ಲಿಟ್ಟು ಸೇವಿಸುವ ಮೂಲಕ ರೋಗ ಬಾರದಂತೆ ನಾವು ಜಾಗೃತವಹಿಸಬೇಕು. ಜನತೆಗೆ ಆಥರ್ಿಕ ಹೊರೆಯುಂಟಾಗದಂತೆ ಭಾರತದ ಪ್ರಧಾನಮಂತ್ರಿಯವರು ಆರೋಗ್ಯರಂಗದಲ್ಲಿ ಜನೌಷಧ ಕೇಂದ್ರದಂತಹ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಇದರ ಪ್ರಯೋಜನ ಬದಿಯಡ್ಕದ ಜನತೆಗೂ ಲಭಿಸುವಂತಾಗಿರುವುದು ಸಂತಸದ ವಿಚಾರವಾಗಿದೆ ಎಂದರು.
ವಿವೇಕಾನಂದ ಪೊಲಿಟೆಕ್ನಿಕ್ ಕಾಲೇಜು ಪುತ್ತೂರು ಇದರ ಆಡಳಿತ ಸಮಿತಿಯ ಅಧ್ಯಕ್ಷ ಪ್ರಸನ್ನ ಎನ್. ಭಟ್  ಪ್ರಾಸ್ತಾವಿಕವಾಗಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಆಹಾರ ಶಿಕ್ಷಣ ಮತ್ತು ಔಷಧಿಯನ್ನು ಮಾರುವ ಪದ್ಧತಿ ಇರಲಿಲ್ಲ. ಆದರೆ ಇಂದು ಈ ಮೂರೂ ಕ್ಷೇತ್ರಗಳು ವ್ಯಾಪಾರೀಕರಣಗೊಂಡಿದೆ. ಇದನ್ನು ಗಮನಿಸಿ ನಮ್ಮ ಹೆಮ್ಮೆಯ ಪ್ರಧಾನಿಯವರು ಆರೋಗ್ಯರಂಗದಲ್ಲಿ ಜನೌಷಧಿ ಕೇಂದ್ರವನ್ನು ತೆರೆಯುವ ಮೂಲಕ ಜನತೆಗೆ ನೆರವಾಗಿದ್ದಾರೆ. ದೇಶದ 4487ನೇ ಜೆನರಿಕ್ ಮದ್ದಿನಂಗಡಿಗಳು ಆರಂಭವಾಗಿದೆ ಎಂದರು.
ಬದಿಯಡ್ಕ ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್ ಶುಭಾಶಂಸನೆಗೈದು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ, ಬ್ಲಾಕ್ ಪಂಚಾಯತ್ ಸದಸ್ಯರುಗಳಾದ ಸತ್ಯಶಂಕರ ಭಟ್ ಹಿಳ್ಳೆಮನೆ, ಅವಿನಾಶ್ ರೈ ಬದಿಯಡ್ಕ,  ಗ್ರಾ. ಸದಸ್ಯ ಮುನೀರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಬದಿಯಡ್ಕ ಶೆಣೈ ಸಿಟಿ ಸೆಂಟರ್ ಮ್ಹಾಲಕ ನಿತ್ಯಾನಂದ ಶೆಣೈ ಪ್ರಥಮ ಖರೀದಿಯನ್ನು ನೆರವೇರಿಸಿದರು. ಬದಿಯಡ್ಕ ಗ್ರಾಮಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ವಿಶ್ವನಾಥ ಪ್ರಭು, ಲಕ್ಷ್ಮೀನಾರಾಯಣ ಪೈ, ಜಯಂತಿ, ಪ್ರೇಮ, ಕುಂಬ್ಡಾಜೆ ಗ್ರಾಮಪಂಚಾಯತ್ ಸದಸ್ಯರುಗಳಾದ ರವೀಂದ್ರ ರೈ ಗೋಸಾಡ, ಶಶಿಧರ ತೆಕ್ಕೆಮೂಲೆ, ಹವ್ಯಕ ಮಹಾ ಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮುಳ್ಳೇರಿಯ ಹವ್ಯಕ ಮಂಡಲದ ಅಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್, ವಿವೇಕಾನಂದ ಪೊಲಿಟೆಕ್ನಿಕ್ ಕಾಲೇಜು ಆಡಳಿತ ಸಮಿತಿಯ ಸಂಚಾಲಕ ಮಹಾದೇವ ಶಾಸ್ತ್ರಿ ಮಣಿಲ ಮೊದಲಾದವರು ಪಾಲ್ಗೊಂಡಿದ್ದರು. ಬದಿಯಡ್ಕ ಜನೌಷಧಿ ಕೇಂದ್ರದ ಮ್ಹಾಲಕ ಕುಮಾರ್ ಎಸ್. ಪೈಸಾರಿ ಸ್ವಾಗತಿಸಿ, ಕುಮಾರಿ ಸಮನ್ವಿ ಕೆರೆಮೂಲೆ ಪ್ರಾರ್ಥನೆಗೈದಳು.

   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries