ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ: ಕೇರಳ ಜೆಡಿಎಸ್ ನಾಯಕನಿಗೆ ದೇವೇಗೌಡ ಸೂಚನೆ
0
ನವೆಂಬರ್ 25, 2018
ಬೆಂಗಳೂರು: ಕೇರಳ ನೀರಾವರಿ ಸಂಪನ್ಮೂಲ ಸಚಿವ ಹಾಗೂ ಜೆಡಿಎಸ್ ಶಾಸಕ ಮ್ಯಾಥ್ಯೂ ಟಿ ಥಾಮಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ದೇವೇಗೌಡ ಅವರ ಈ ತೀಮರ್ಾನಕ್ಕೆ ಕೇರಳದ ಜೆಡಿಎಸ್ ಪಕ್ಷದಲ್ಲಿರುವ ಹಿರಿಯ ನಾಯಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ದೇವೇಗೌಡ ಅವರ ನಿಧರ್ಾರ ಆಶ್ಚರ್ಯವನ್ನು ತಂದಿದೆ ಎಂದು ಹೇಳಿದ್ದಾರೆ.
ಕಚೇರಿಯಲ್ಲಿ ಸಚಿವರ ಪತ್ನಿ ಸಿಬ್ಬಂದಿಗಳೊಂದಿಗೆ ಜಾತಿವಾದಿ ನಿಂದನೆಗಳನ್ನು ಮಾಡುತ್ತಿರುವ ಹಿನ್ನಲೆಯಲ್ಲಿ ದೇವೇಗೌಡ ಅವರು ಈ ರೀತಿಯ ನಿಧರ್ಾರವನ್ನು ತೆಗೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ರಾಜ್ಯದ ಆಡಳಿತಾರೂಢ ಎಲ್'ಡಿಎಫ್ ಪಕ್ಷದಲ್ಲಿ ಜೆಡಿಎಸ್ ಪಕ್ಷದ ಮೂವರು ಶಾಸಕರಿದ್ದಾರೆ. ಇದರಲ್ಲಿ ಥಾಮಸ್ ಕೂಡ ಒಬ್ಬರಾಗಿದ್ದಾರೆ.
ಸಚಿವ ಸ್ಥಾನದಲ್ಲಿರಲು ಥಾಮಸ್ ಅವರಿಗೆ ಅವಕಾಶ ನೀಡಲಾಗಿತ್ತು. ಇದೀಗ ಮತ್ತೊಬ್ಬ ಶಾಸಕರಿಗೆ ಆ ಅವಕಾಶ ನೀಡುವುದು ಸಾಮಾನ್ಯ. ಹೀಗಾಗಿ ಪಕ್ಷ ಮತ್ತೊಬ್ಬ ಶಾಸಕರಿಗೆ ಆ ಅವಕಾಶ ನೀಡುವ ಸಲುವಾಗಿ ಥಾಮಸ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ ಎಂದು ಕೇರಳ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದಶರ್ಿ ದಾನಿಶ್ ಅಲಿಯವರು ಹೇಳಿದ್ದಾರೆ.


