ಪ್ರಶಾಂತ ಭವನದ ಪ್ರಥಮ ವಾಷರ್ಿಕೋತ್ಸವ
ಬದಿಯಡ್ಕ: ಕಾಡಮನೆ ಸೈಕೋ ಸೋಷ್ಯಲ್ ರಿಹ್ಯಾಬಿಲಿಟೇಶನ್ ಸೆಂಟರ್ನ `ಪ್ರಶಾಂತ ಭವನ'ದ ಪ್ರಥಮ ವಾಷರ್ಿಕೋತ್ಸವವನ್ನು ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಬುಧವಾರ ಉದ್ಘಾಟಿಸಿದರು.
ಅವರು ಮಾತನಾಡಿ, ಸ್ವಾರ್ಥ ಮನೋಭಾವವನ್ನು ಬದಿಗೊತ್ತಿ ಮನುಷ್ಯ ಸ್ನೇಹವೆಂಬುದು ಏನೆಂಬುದನ್ನು ಇಲ್ಲಿಂದ ತಿಳಿದುಕೊಳ್ಳಬೇಕಾಗಿದೆ. ಮಾನಸಿಕ ಹಾಗೂ ಶಾರೀರಿಕವಾಗಿ ಬಳಲುತ್ತಿರುವ ವ್ಯಕ್ತಿಗಳನ್ನು ನೋಡಿಕೊಳ್ಳಲು ಮನುಷ್ಯರು ಯಾವರೀತಿಯಲ್ಲಿ ತಯಾರಿದ್ದಾರೆ ಎಂದು ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾನೆ. ಸುಖ ದುಃಖ ಎರಡನ್ನು ನೀಡುವವನೂ ದೇವರಾಗಿದ್ದಾನೆ ಎಂಬುದನ್ನು ನಾವು ಸದಾ ನೆನಪಿಟ್ಟುಕೊಳ್ಳಬೇಕು. ಪ್ರಶಾಂತ ಭವನವು ನೊಂದವರ ಬಾಳಿಗೆ ಬೆಳಕಾಗಲಿ ಎಂದರು.
ಮಾಥರ್ೋಮ ಸಭಾ ಕುನ್ನಂಕುಳಂ ಮಲಬಾರ್ ಭದ್ರಾಸನದ ಅಧ್ಯಕ್ಷ ಡಾ. ಥೋಮಸ್ ಮಾರ್ ತಿಥೋಸ್ ಎಪಿಸ್ಕೋಪೋ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸಂದೇಶವನ್ನು ನೀಡಿದರು. ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಮಾಜಿ ಪಂ.ಅಧ್ಯಕ್ಷ ಮಾಹಿನ್ ಕೇಳೋಟ್ ಉಪಸ್ಥಿತರಿದ್ದು ಮಾತನಾಡಿದರು. ಕಾಡಮನೆ ಪ್ರಶಾಂತ ಭವನದ ಕಾರ್ಯದಶರ್ಿ ವಿ.ಎಂ.ಬಾಬು ವರದಿ ನೀಡಿದರು. ಸಂಚಾಲಕ ರೆ| ಮಾಥ್ಯು ಸಾಮ್ಯುಯೆಲ್ ಸ್ವಾಗತಿಸಿ, ಕೋಶಾಧಿಕಾರಿ ರೆನಿಲ್ ಥೋಮಸ್ ಧನ್ಯವಾದವನ್ನಿತ್ತರು.
ಮಾಥರ್ೋಮ ಸಭಾ ಕುನ್ನಂಕುಳಂ ಮಲಬಾರ್ ಭದ್ರಾಸನದ ನೇತೃತ್ವದಲ್ಲಿ ಬದಿಯಡ್ಕ ಸಮೀಪದ ಕಾಡಮನೆಯಲ್ಲಿ ಶಾರೀರಿಕ ಹಾಗೂ ಮಾನಸಿಕವಾಗಿ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿದರೂ ಮನೆಯವರು ತಿರುಗಿ ನೋಡದಂತಹ ವ್ಯಕ್ತಿಗಳನ್ನು ನೋಡಿಕೊಳ್ಳಲು ಕಳೆದ ವರ್ಷ ಆರಂಭಿಸಲಾದ `ಪ್ರಶಾಂತ ಭವನ'ದಲ್ಲಿ 10 ಮಂದಿ ಗಂಡಸರನ್ನು ನೋಡಿಕೊಳ್ಳಲಾಗುತ್ತದೆ.
ಬದಿಯಡ್ಕ: ಕಾಡಮನೆ ಸೈಕೋ ಸೋಷ್ಯಲ್ ರಿಹ್ಯಾಬಿಲಿಟೇಶನ್ ಸೆಂಟರ್ನ `ಪ್ರಶಾಂತ ಭವನ'ದ ಪ್ರಥಮ ವಾಷರ್ಿಕೋತ್ಸವವನ್ನು ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಬುಧವಾರ ಉದ್ಘಾಟಿಸಿದರು.
ಅವರು ಮಾತನಾಡಿ, ಸ್ವಾರ್ಥ ಮನೋಭಾವವನ್ನು ಬದಿಗೊತ್ತಿ ಮನುಷ್ಯ ಸ್ನೇಹವೆಂಬುದು ಏನೆಂಬುದನ್ನು ಇಲ್ಲಿಂದ ತಿಳಿದುಕೊಳ್ಳಬೇಕಾಗಿದೆ. ಮಾನಸಿಕ ಹಾಗೂ ಶಾರೀರಿಕವಾಗಿ ಬಳಲುತ್ತಿರುವ ವ್ಯಕ್ತಿಗಳನ್ನು ನೋಡಿಕೊಳ್ಳಲು ಮನುಷ್ಯರು ಯಾವರೀತಿಯಲ್ಲಿ ತಯಾರಿದ್ದಾರೆ ಎಂದು ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾನೆ. ಸುಖ ದುಃಖ ಎರಡನ್ನು ನೀಡುವವನೂ ದೇವರಾಗಿದ್ದಾನೆ ಎಂಬುದನ್ನು ನಾವು ಸದಾ ನೆನಪಿಟ್ಟುಕೊಳ್ಳಬೇಕು. ಪ್ರಶಾಂತ ಭವನವು ನೊಂದವರ ಬಾಳಿಗೆ ಬೆಳಕಾಗಲಿ ಎಂದರು.
ಮಾಥರ್ೋಮ ಸಭಾ ಕುನ್ನಂಕುಳಂ ಮಲಬಾರ್ ಭದ್ರಾಸನದ ಅಧ್ಯಕ್ಷ ಡಾ. ಥೋಮಸ್ ಮಾರ್ ತಿಥೋಸ್ ಎಪಿಸ್ಕೋಪೋ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸಂದೇಶವನ್ನು ನೀಡಿದರು. ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಮಾಜಿ ಪಂ.ಅಧ್ಯಕ್ಷ ಮಾಹಿನ್ ಕೇಳೋಟ್ ಉಪಸ್ಥಿತರಿದ್ದು ಮಾತನಾಡಿದರು. ಕಾಡಮನೆ ಪ್ರಶಾಂತ ಭವನದ ಕಾರ್ಯದಶರ್ಿ ವಿ.ಎಂ.ಬಾಬು ವರದಿ ನೀಡಿದರು. ಸಂಚಾಲಕ ರೆ| ಮಾಥ್ಯು ಸಾಮ್ಯುಯೆಲ್ ಸ್ವಾಗತಿಸಿ, ಕೋಶಾಧಿಕಾರಿ ರೆನಿಲ್ ಥೋಮಸ್ ಧನ್ಯವಾದವನ್ನಿತ್ತರು.
ಮಾಥರ್ೋಮ ಸಭಾ ಕುನ್ನಂಕುಳಂ ಮಲಬಾರ್ ಭದ್ರಾಸನದ ನೇತೃತ್ವದಲ್ಲಿ ಬದಿಯಡ್ಕ ಸಮೀಪದ ಕಾಡಮನೆಯಲ್ಲಿ ಶಾರೀರಿಕ ಹಾಗೂ ಮಾನಸಿಕವಾಗಿ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿದರೂ ಮನೆಯವರು ತಿರುಗಿ ನೋಡದಂತಹ ವ್ಯಕ್ತಿಗಳನ್ನು ನೋಡಿಕೊಳ್ಳಲು ಕಳೆದ ವರ್ಷ ಆರಂಭಿಸಲಾದ `ಪ್ರಶಾಂತ ಭವನ'ದಲ್ಲಿ 10 ಮಂದಿ ಗಂಡಸರನ್ನು ನೋಡಿಕೊಳ್ಳಲಾಗುತ್ತದೆ.