ಉಪ್ಪಳ: ಬಾಯಾರು ಸಮೀಪದ ಸಜಂಕಿಲ ಆವಳ ಮಠ ಶ್ರೀದುಗರ್ಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಕಾತರ್ಿಕ ಹುಣ್ಣಿಮೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ ಪೂಜೆ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ರಾತ್ರಿ ವಿಶೇಷ ದೀಪೋತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 1 ರಿಂದ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಪ್ರಸಾದ ಬಲಿಪ, ಅರ್ಥಧಾರಿಗಳಾಗಿ ಶಂಭು ಶಮರ್ಾ ವಿಟ್ಲ, ವಾಸುದೇವ ರಂಗಾ ಭಟ್ ಮಧೂರು, ವಿದ್ವಾನ್. ಹಿರಣ್ಯ ವೆಂಕಟೇಶ್ವರ ಭಟ್, ಜಯಪ್ರಕಾಶ ಶೆಟ್ಟಿ ಪೆಮರ್ುದೆ ಮೊದಲಾದವರು ಭಾಗವಹಿಸುವರು.


