ಜಮ್ಮು ಕಾಶ್ಮೀರ: ಶ್ರೀನಗರ ಹೊರವಲಯದಲ್ಲಿ ಉಗ್ರರು-ಸೇನಾಪಡೆ ನಡುವೆ ಎನ್ ಕೌಂಟರ್ ಪ್ರಾರಂಭ
0
ಡಿಸೆಂಬರ್ 08, 2018
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿ ಶ್ರೀನಗರ ಹೊರವಲಯದಲ್ಲಿ ಉಗ್ರಗಾಮಿಗಳು ಹಾಗೂ ಸೇನಾ ಪಡೆಗಳ ನಡುವೆ ಶನಿವಾರ ಎನ್ ಕೌಂಟರ್ ಪ್ರಾರಂಭವಾಗಿರುವುದಾಗಿ ಪೋಲೀಸರು ಹೇಳಿದ್ದಾರೆ.
ನಗರದ ಹೊರವಲಯದಲ್ಲಿರುವ ಶ್ರೀನಗರ-ಬಂಡೀಪೂರ ರಸ್ತೆಯ ಮುಜಗುಂದ್ ಪ್ರದೇಶದಲ್ಲಿ ಇಂದು ಸಂಜೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಈ ವೇಳೆ ಉಗ್ರಗಾಮ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಸೇನಾಪಡೆಯು ಎನ್ ಕೌಂಟರ್ ನಡೆಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ
.ಗುಂಡಿನ ಚಕಮಕಿ ಮುಂದುವರಿದಿದ್ದು ಮತ್ತಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.





