ಕಾಟುಕುಕ್ಕೆಯಲ್ಲಿ ಧನು ಪೂಜೆ ಆರಂಭ
0
ಡಿಸೆಂಬರ್ 17, 2018
ಪೆರ್ಲ:ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ಸೋಮವಾರ ಧನು ಪೂಜೆ ಆರಂಭವಾಯಿತು.
ಬೆಳಿಗ್ಗೆ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಣಿಲ ದೇಲಂತಮಜಲು ವಿಷ್ಣುಮೂರ್ತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಗಣೇಶ ಕುಮಾರ್ ದೇಲಂತಮಜಲು, ದೀಪೋಜ್ವಲನೆ ನಡೆಸಿ ಉದ್ಘಾಟಿಸಿದರು.ಕೆಡೆಂಜಿ ಮಹಾವಿಷ್ಣು ಕ್ಷೇತ್ರದ ಅಧ್ಯಕ್ಷ, ಧಾರ್ಮಿಕ ಮುಂದಾಳು ವಸಂತ ಪೈ, ಧನು ಪೂಜಾ ಸಮಿತಿ ಅಧ್ಯಕ್ಷ ಮಿತ್ತೂರು ಪುರುಷೋತ್ತಮ ಭಟ್, ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಮಣಿಯಾಣಿ, ಆಡಳಿತ ಮಂಡಳಿ, ಧನು ಪೂಜೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಸದಸ್ಯರು, ಅರ್ಚಕರು, ಸಿಬ್ಬಂದಿ ವರ್ಗ ಸದಸ್ಯರು ಉಪಸ್ಥಿತರಿದ್ದರು. ರುದ್ರ ಪಾರಾಯಣ, ಭಜನಾ ಕಾರ್ಯಕ್ರಮ ನಡೆದವು. ರಾಮಕೃಷ್ಣ ಕಾಟುಕುಕ್ಕೆ ನೇತೃತ್ವ ದಲ್ಲಿ ಭಜನಾ ಸಂಕೀರ್ತನೆ ನಡೆಯಿತು.
ಜ.14ರ ತನಕ ಎಲ್ಲಾ ದಿನಗಳಲ್ಲೂ ಧನುಪೂಜೆ, ಬೆಳಗ್ಗೆ 5ರಿಂದ ಧನು ಮಾಸದ ವಿಶೇಷ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, 6.30ಕ್ಕೆ ಪ್ರಾತಃಕಾಲದ ಪೂಜೆ, ಪ್ರಸಾದ ವಿತರಣೆ ಬಳಿಕ ಉಪಹಾರ ವ್ಯವಸ್ಥೆ ಇದೆಯೆಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



