HEALTH TIPS

ಚುನಾವಣೆ: ಜಿಲ್ಲಧಿಕಾರಿಗಳಿಂದ ಮತಗಟ್ಟೆ ಸಂದರ್ಶನ

ಕಾಸರಗೋಡು: ಲೋಕಸಭೆ ಚುನಾವಣೆ ಸಿದ್ಧತೆ ಅಂಗವಾಗಿ ಜಿಲ್ಲೆಯ 16 ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಂದರ್ಶನ ನಡೆಸಿದರು. ಮೂಲಭೂತ ಸೌಲಭ್ಯಗಳ ಪರಿಶೀಲನೆ, ಸಂಬಂಧಪಟ್ಟ ಸಿಬ್ಬಂದಿಗೆ ಮಾರ್ಗದರ್ಶನ ಇತ್ಯಾದಿ ಉದ್ದೇಶಗಳಿಂದ ಅವರು ಈ ಸಂದರ್ಶನ ನಡೆಸಿದರು. ಮಂಜೇಶ್ವರ ತಾಲೂಕಿನ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ(ಬೂತ್ ನಂಬ್ರ 161,162), ಕಾನತ್ತಿಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ(163), ಪುತ್ತಿಗೆ ಗ್ರಾಮಪಚಾಯತ್ ನ ಅನುದಾನಿತ ಕಿರಿಯ ಬುನಾದಿ ಶಾಲೆ(167,168,169,170) ಶೇಣಿ ಶ್ರೀ ಶಾರದಾಂಬಾ ಪ್ರೌಢಶಾಲೆ(187,188), ಉಳಿಯತ್ತಡ್ಕ ಸರಕಾರಿ ವೆಲ್ಪೇರ್ ಕಿರಿಯ ಪ್ರಾಥಮಿಕ ಶಾಲೆ ಸಿರಿಬಾಗಿಲು(32,33,34,35), ಧರ್ಭೆತ್ತಡ್ಕ ಸಂತ ಬಾರ್ತಲೋಮ ಅನುದಾನಿತ ಬುನಾದಿ ಶಾಲೆ ಬೇಳ(64,65,66) ಎಂಬಲ್ಲಿಗೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries