ಕಾಸರಗೋಡು: ಕೇಂದ್ರ ಸರಕಾರವು ಕೇಂದ್ರ ಸರಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ತೆ ಕೊಟ್ಟಂತೆ ಕೇರಳ ಸರಕಾರವು ನೌಕರರಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ತೆ 01.01.2018 ರಿಂದ 31.06.2018 ರ ವರೆಗೆ ಶೇ.2 ಮತ್ತು 01.07.2018 ರಿಂದ 30.04.2019 ರ ವರೆಗೆ ಶೇ.5 ತುಟ್ಟಿ ಭತ್ತೆ ಹೆಚ್ಚಿಸಿದ ಬಗ್ಗೆ ಕೇರಳ ಸರಕಾರಕ್ಕೆ ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾ ಸಂಘ ಅಭಿನಂದನೆ ಸಲ್ಲಿಸಿದೆ.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎಂ.ಬಾಲಕೃಷ್ಣ ವಹಿಸಿದ್ದರು. ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘದ ಅಖಿಲ ಭಾರತ ಅಧ್ಯಕ್ಷ ಸಿ.ಎಚ್.ಸುರೇಶ್ ಮಾತನಾಡಿ ಕೇರಳ ಸರಕಾರವು ತುಟ್ಟಿ ಭತ್ತೆ ನೀಡಿದ ಬಗ್ಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಎಂ.ಬಾಲಕೃಷ್ಣ, ಜಿಲ್ಲಾ ಕಾರ್ಯದರ್ಶಿ ಕೆ.ವಿಶ್ವನಾಥ ರಾವ್, ಜಿಲ್ಲಾ ಕೋಶಾ„ಕಾರಿ ಎಂ.ಗೋಪಾಲ, ಜನಾರ್ಧನ, ಸಿ.ಎಚ್.ಶ್ರೀಧರ, ಜಿ.ದಿವಾಕರ, ಗೋಪಾಲಕೃಷ್ಣ, ಉಷಾ, ಸರಸ್ವತಿ ಸಭೆಯಲ್ಲಿ ಮಾತನಾಡಿ ತುಟ್ಟಿ ಭತ್ತೆ ಹೆಚ್ಚಿಸಿದ ಬಗ್ಗೆ ಕೇರಳ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.
01.01.2019 ರಿಂದ ಬಾಕಿ ಇರುವ ತುಟ್ಟಿ ಭತ್ತೆಯನ್ನು ಶೀಘ್ರವೇ ನೀಡಬೇಕೆಂದು ಕೇರಳ ಸರಕಾರವನ್ನು ಆಗ್ರಹಿಸಿತು. ಜಿಲ್ಲಾ ಕಾರ್ಯದರ್ಶಿ ಕೆ.ವಿಶ್ವನಾಥ ರಾವ್ ಸ್ವಾಗತಿಸಿದರು. ಕೆ.ಕುಂಞÂಕಣ್ಣನ್ ವಂದಿಸಿದರು.