HEALTH TIPS

ಅಯೋಮಯ ಸ್ಥಿತಿಯಲ್ಲಿ ಪಡಿತರ ವ್ಯವಸ್ಥೆ= ಅನರ್ಹರ ಪತ್ತೆಗಾಗಿ ಮನೆ ಬಾಗಿಲಿಗೆ ತೆರಳುತ್ತಿದ್ದಾರೆ ಅಧಿಕಾರಿಗಳು= ಕಾರ್ಯಾಚರಣೆ ಆರಂಭಗೊಂಡಂದಿನಿಂದ 318 ಅನಧಿಕೃತ ಕಾಡುಗಳ ಪತ್ತೆ= ರೇಶನ್‍ಕಾರ್ಡಿನ ಪ್ರತಿ ಸದಸ್ಯನ ಆಧಾರ್ ಜೋಡಣೆಗೂ ಕ್ರಮ

     

       ಕಾಸರಗೋಡು: ಜಿಲ್ಲೆಯಲ್ಲಿ ಅನರ್ಹರಾದ ಆದ್ಯತಾ ಪಟ್ಟಿಯಲ್ಲಿ, ಎ.ಎ.ವೈ. ಪಡಿತರ ಚೀಟಿ ಇರಿಸಿಕೊಂಡಿರುವವರನ್ನು ಪತ್ತೆಮಾಡುವ ನಿಟ್ಟಿನಲ್ಲಿ ತಪಾಸಣಾ ಕಾರ್ಯವನ್ನು ಜಿಲ್ಲಾ ನಾಗರಿಕ ಪೂರೈಕೆ ಇಲಾಖೆ ಚುರುಕುಗೊಳಿಸಿದೆ.
      ಈ ನಿಟ್ಟಿನಲ್ಲಿ ಮೇ 6 ರಂದು ಕಾರ್ಯಾಚರಣೆ ಆರಂಭಿಸಲಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ ಅನರ್ಹರಾದ 318 ಕಾರ್ಡ್ ದಾರರ ಪತ್ತೆಚ್ಚಲಾಗಿದೆ. ಈ ಕಾರ್ಡ್ ಬಳಸಿ ಪ್ರಸಕ್ತ ಕಾರ್ಡುದಾರರು ಇದುವರೆಗೆ ಪಡೆದ ಪಡಿತರ ಸಾಮಾಗ್ರಿಗಳ ಮೌಲ್ಯ ರೂಪದಲ್ಲಿ ಕಿಲೋಗೆ 29.81ರೂ.ನಂತೆ ದಂಡ ಪಡೆಯುವ ಕ್ರಮ ಆರಂಭಿಸಿದೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಈಗಾಗಲೇ ಅನರ್ಹಗೊಳಿಸಲಾಗಿದೆ.
     ಆದರೆ ಅನೇಕ ಮಂದಿಗೆ ಸೂಚನೆ ನೀಡಿಯೂ ಕಾರ್ಡ್ ಹಿಂದಿರುಗಿಸದ ಹಿನ್ನೆಲೆಯಲ್ಲಿ ಜಿಲ್ಲಾ, ತಾಲೂಕು ಮಟ್ಟದ ನಾಗರಿಕ ಪೂರೈಕೆ ಅ„ಕಾರಿಗಳ ನೇತೃತ್ವದಲ್ಲಿ ಪಡಿತರ ಇನ್ಸ್‍ಪೆಕ್ಟರ್‍ಗಳನ್ನು ಒಳಗೊಂಡ ತಂಡದಿಂದ ಜಿಲ್ಲೆಯ ವಿವಿಧೆಡೆ ತಪಾಸಣೆ ನಡೆಸಲಾಗುತ್ತಿದೆ. ಈ ರೀತಿ ಪತ್ತೆಯಾಗುವ ಆರೋಪಿಗಳಿಗೆ ದಂಡ ಹೇರಲಾಗುತ್ತಿದೆ. ನಾಗರಿಕ ಪೂರೈಕೆ ನಿರ್ದೇಶಕರಿಂದ ಲಭಿಸಿದ ಮೂರು ತಿಂಗಳಿಗಿಂತ ಅ„ಕ ಪಡಿತರ ಸಾಮಾಗ್ರಿ ಖರೀದಿಸದೇ ಇರುವ ಆದ್ಯತಾಕಾರ್ಡ್ ದಾರರು, 65 ವರ್ಷಕ್ಕಿಂತ ಅ„ಕ ವಯೋಮಾನದ ಮಂದಿ ಮಾತ್ರ ಇರುವ ಕಾರ್ಡ್ ಗಳು, ಒಬ್ಬರು ಮಾತ್ರ ಇರುವ ಕಾರ್ಡ್‍ಗಳು ಇತ್ಯಾದಿಗಳ ತಪಾಸಣೆ ನಡೆಯುತ್ತಿದೆ. ಪಟ್ಟಿ ಪ್ರಕಾರ ಅನರ್ಹರಾದ 371 ಕಾರ್ಡ್‍ಗಳನ್ನು ಈಗಾಗಲೇ ರದ್ದು ಪಡಿಸಲಾಗಿದೆ. ಆನಿವಾಸಿ ಭಾರತೀಯ ಎಂಬ ಮಾಹಿತಿ ನೀಡದಿರುವುದು, ಮೃತರಾದವರ ಹೆಸರು ತೆರವುಗೊಳಿಸದಿರುವುದು, ಆದ್ಯತಾ ಪಟ್ಟಿಯಲ್ಲಿದ್ದು, ಈಗ ವಿಳಾಸ ಬದಲಿಸಿರುವ ಮಂದಿಯ ಹೆಸರಲ್ಲಿ ಪಡಿತರ ಸಾಮಾಗ್ರಿಗಳನ್ನು ಪಡೆಯುತ್ತಿರುವುದನ್ನೂ ಇಲಾಖೆ ಪರಿಗಣಿಸುತ್ತಿದೆ. ತಪಾಸಣೆ ಸಂದರ್ಭ ಲೋಪ ಪತ್ತೆಯಾದರೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
      ಆಧಾರ್ ಕಡ್ಡಾಯ:
ಪಡಿತರ ಚೀಟಿಗಳಲ್ಲಿ ಆದಾರ್ ನಂಬ್ರ ಅಳವಡಿಸದೇ ಇರುವವರಿಗೆ ಅಕ್ಷಯ ಕೇಂದ್ರ ಅಥವಾ ನಾಗರಿಕ ಪೂರೈಕೆ ಕೇಂದ್ರಗಳ ಮೂಲಕ ಸೇರ್ಪಡೆಗೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಈಗಾಗಲೇ ಆಧಾರ್ ಜೋಡಿಸದ ಸದಸ್ಯರಿಗೆ ರೇಶನ್ ಸಾಮಗ್ರಿ ಕಟ್ ಮಾಡಿ ಇಲಾಖೆ ಆದೇಶ ಹೊರಡಿಸಿದೆ. ಎರಡು ಪಡಿತರ ಚೀಟಿಗಳಲ್ಲಿ ಹೆಸರು ಹೊಂದಿರುವ ವ್ಯಕ್ತಿಗಳು ತುರ್ತಾಗಿ ಒಂದರಲ್ಲಿ ಹೆಸರು ತೆರವುಗೊಳಿಸಬೇಕು. ಈ ಸಂಬಂಧ ದೂರುಗಳಿದ್ದಲ್ಲಿ  ಕಾಸರಗೋಡು ತಾಲೂಕು: 9188527412., ಮಂಜೇಶ್ವರ: 9188527415., ಹೊಸದುರ್ಗ: 9188527413., ವೆಳ್ಳರಿಕುಂಡ್: 9188527414 ಎಂಬ ದೂರವಾಣಿ ಸಂಖ್ಯೆಗೆ ನೀಡಬಹುದಾಗಿದೆ.
       ಆದ್ಯತಾ ಪಟ್ಟಿ ಮಾನದಂಡ:
ಸರರ್ಕಾರಿ ಯಾ ಅರೆ ಸರ್ಕಾರಿ ಸಿಬ್ಬಂದಿ, ಸಾರ್ವಜನಿಕ, ಸಹಕಾರಿ ಸಂಸ್ಥೆಗಳ ಸಿಬ್ಬಂದಿ, ಸೇವಾ ಪಿಂಚಣಿದಾರರು,ಆದಾಯ ತೆರಿಗೆದಾರರು, ಪ್ರತಿ ತಿಂಗಳ ಆದಾಯ 25 ಸಾವಿರಕ್ಕಿಂತ ಅ„ಕವಾಗಿರುವವರು, ವಿದೇಶಗಳಲ್ಲಿ ದುಡಿಯುತ್ತಿರುವವರು, ಸ್ವಂತವಾಗಿ ಒಂದು ಎಕ್ರೆಗಿಂತ ಅ„ಕ ಜÁಗ ಹೊಂದಿರುವವರು(ಪರಿಶಿಷ್ಟ ಪಂಗಡದವರ ಹೊರತಾಗಿ),ಸ್ವಂತವಾಗಿ ಒಂದು ಸಾವಿರ ಚ.ಅಡಿ ವಿಸ್ತೀರ್ಣದ ಮನೆ, -Á್ಲಟ್ ಹೊಂದಿರುವವರು, ನಾಲ್ಕು ಚಕ್ರ ವಾಹನ ಹೊಂದಿರುವವರು(ಬದುಕಿಗಾಗಿ ಟ್ಯಾಕ್ಸಿ ಚಲಾಯಿಸುವವರ ಹೊರತಾಗಿ), ಕುಟುಂಬದ ಸದಸ್ಯರಲ್ಲಿ ಯಾರಾದರೂ ಒಬ್ಬರ ಆದಾಯ ತಿಂಗಳಿಗೆ 25 ಸಾವಿರ ರೂ.ಗಿಂತ ಅ„ಕ ಉಳ್ಳವರು ಈ ಮಾನದಂಡಕ್ಕೆ ಒಳಗಾಗಲಿದ್ದಾರೆ.
          ಅಭಿಮತ:
ಅನರ್ಹರು ಸ್ವ ಪ್ರೇರಣೆಯಿಂದ ಆದ್ಯತೆ ರಹಿತ ಕಾರ್ಡ್‍ದಾರರ ಪಟ್ಟಿಗೆ ಅರ್ಜಿ ಸಲ್ಲಿಸಿದರೆ, ಅರ್ಹರಿಗೆ ಆದ್ಯತೆ ಕಾರ್ಡ್ ನೀಡಿಕೆ ಸಹಕಾರಿಯಾಗಲಿದೆ. ಈಗಾಗಲೇ ಅನರ್ಹರು ಇರಿಸಿಕೊಂಡಿರುವ ಆದ್ಯತಾ ಕಾರ್ಡ್‍ಗಳನ್ನು ನಾಗರಿಕ ಪೂರೈಕೆ ಅ„ಕಾರಿಗೆ ಸಲ್ಲಿಸಿದಲ್ಲಿ ಶಿಕ್ಷಾ ಕ್ರಮಗಳಿಂದ ಹೊರಬಹುದಾಗಿದೆ. ಅನರ್ಹರನ್ನು ಪತ್ತೆಹಚ್ಚಲು ಮನೆ ಸಂದರ್ಶನ ಮುಂದುವರಿಯಲಿದೆ. ಸುಳ್ಳು ಮಾಹಿತಿ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
                                  ರಾಜೀವ್ ಕೆ
                       ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ, ಕಾಸರಗೋಡು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries