ಕಾಸರಗೋಡು: ಜಿಲ್ಲೆಯ ಕೆಲವು ಶಾಲೆಗಳಲ್ಲಿ ರ್ಯಾಗಿಂಗ್ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಅಂಥಾ ಕೃತ್ಯಗಳ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ನೂತನವಾಗಿ ಅನುಷ್ಟಾನಗೊಂಡಿರುವ ಬಾಲನೀತಿ ವ್ಯವಸ್ಥೆಯಾಗಿರುವ ಚೈಲ್ಡ್ ವೆಲ್ ಫೇರ್ ಸಮಿತಿ ಸದಸ್ಯರ ಅವಲೋಕನ ಅಧಿಕಾರ ಹೊಂದಿರುವ ಜಿಲ್ಲಾಧಿಕಾರಿ ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರ್ಯಾಗಿಂಗ್ ನಡೆದಿದ್ದರೂ, ಆ ಬಗ್ಗೆ ಕ್ರಮಕೈಗಳ್ಳದೇ ಇರುವ ಶಾಲೆಗಳ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮನಡೆಸಲಾಗುವುದು. ಪೊಲೀಸರಿಗೆ ಈ ಸಂಬಂಧ ಕ್ರಮಕೈಗೊಳ್ಳುವ ಹೊಣೆಗಾರಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಅತ್ಯಧಿಕ ಕರುಣೆ, ಗಮನ ಬೇಕಾಗಿರುವಮಕ್ಕಳನ್ನು ಪತ್ತೆ ಮಾಡಿ ಅವರಿಗೆ ಬೇಕಾದ ಆರ್ಥಿಕ ಸಹಿತ ಸಹಾಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಯೋಜಕರನ್ನು ಪತ್ತೆಮಾಡಬೇಕು ಎಂದು ಸಭೆ ಆಗ್ರಹಿಸಿದೆ.
ಸಮಿತಿ ಅನುಷ್ಟಾನಕ್ಕೆ ಬಂದ ನಂತರ ಸಿ.ಡಬ್ಲ್ಯೂ.ಸಿ.ಗೆ ಸಲ್ಲಿಸಲಾದ ಕೇಸ್ ಗಳಲ್ಲಿ 205 ಪ್ರಕರಣಗಳನ್ನು ತೀರ್ಪುಗೊಳಿಸಲಾಗಿದೆ ಎಂದು ಡಿ.ಡಬ್ಲ್ಯೂ.ಸಿ. ಅಧ್ಯಕ್ಷೆ ತಿಳಿಸಿದರು. ಉಳಿದ 16 ಪ್ರಕರಣಗಳನ್ನು ಸಂಬಂಧವರಿಂದ ವರದಿ ಪಡೆದು ತುರ್ತಾಗಿ ತೀರ್ಪುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದರು.
ಸಿ.ಡಬ್ಲ್ಯೂ.ಸಿ. ಅಧ್ಯಕ್ಷೆ,ನ್ಯಾಯವಾದಿ ಶ್ಯಾಮಲಾದೇವಿ, ಸದಸ್ಯರಾದ ನ್ಯಾಯವಾದಿ ಶಿವಪ್ರಸಾದ್, ನ್ಯಾಯವಾದಿ ರಜಿತಾ, ನ್ಯಾಯವಾದಿ ಪ್ರಿಯ, ಜ್ಯುವೆನೆಲ್ ಜಸ್ಟಿಸ್ ಮಂಡಳಿ ಸದಸ್ಯ ನ್ಯಾಯವಾದಿ ಮೋಹನ್ ಕುಮಾರ್,ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಪಿ.ಬಿಜು ವರದಿ ವಾಚಿಸಿದರು. ಮಹಿಳಾ ಘಟಕ ಪೊಲೀಸ್ ಇನ್ಸ್ ಪೆಕ್ಟರ್ ಭಾನುಮತಿ, ಸರಕಾರಿ ಚಿಲ್ಡ್ರನ್ಹೋಂ ವರಿಷ್ಟಾಧಿಕಾರಿ ಮಾಯಾ ಎಸ್.ಕೆ.,ಚೈಲ್ಡ್ ಲೈನ್ ನೋಡೆಲ್ ಸಂಚಾಲಕ ಅನೀಷ್ ಜೋಸ್, ಡಿ.ಪಿ.ಸಿ.ಯು.ಲೀಗಲ್ ಕಂ ಪ್ರೊಬೇಷನ್ ಅಧಿಕಾರಿ ನ್ಯಾಯವದಿ ಎ.ಶ್ರೀಜಿತ್, ಡಿ.ಪಿ.ಸಿ.ಯು. ಕೌನ್ಸಿಲರ್ ಅನು ಅಬ್ರಾಹಂ, ಔಟ್ ರೀಚ್ ವರ್ಕರ್ ಸುನಿತಾ, ಸುನಿತಾ ಬಿ., ಪ್ರೊಟೆಕ್ಷನ್ ಆಫೀಸರ್ ರೇಷ್ಮಾ ಟಿ.ಕೆ.ಉಪಸ್ಥಿತರಿದ್ದರು.

