HEALTH TIPS

ಕುಡಿಯುವ ನೀರಿನಬರ ಪರಿಹಾರ: ಪ್ರಗತಿಯಲ್ಲಿ ನದಿತಟ ಅಭಿವೃದ್ಧಿ ಯೋಜನೆ


        ಕುಂಬಳೆ: ಜಿಲ್ಲೆ ಅನುಭವಿಸುತ್ತಿರುವ ಕುಡಿಯುವ ನೀರಿನ ಬರ ಪರಿಹಾರಕ್ಕೆ ಜಿಲ್ಲಾಡಳಿತೆ ನೇತೃತ್ವದಲ್ಲಿ ಜಾರಿಗೊಳಿಸುವ ಸಮಗ್ರ ನದಿತಟ ಅಭಿವೃದ್ಧಿ ಯೋಜನೆ ಪ್ರಗತಿಯಲ್ಲಿದೆ.
      ಇದರ ಮೊದಲ ಹಂತವಾಗಿ ಮಂಜೇಶ್ವರ ತಾಲೂಕಿನ ಮಂಜೇಶ್ವರ, ಉಪ್ಪಳ, ಶಿರಿಯ, ಕುಂಬಳೆ,ಮೊಗ್ರಾಲ್ ಎಂಬ 5 ನದಿಗಳಿಗೆ ಸಂಬಂಧಿಸಿ ಯೋಜನೆ ಜಾರಿಗೊಳ್ಳಲಿದೆ.
  ಜಿಲ್ಲಾ ಮಣ್ಣು ಸಂರಕ್ಷಣೆ ಕಚೇರಿಯ ನೇತೃತ್ವದಲ್ಲಿ ಸರಕಾರಿ, ಖಾಸಗಿ ಜಾಗಗಳಲ್ಲಿ ಸೇರಿರುವ 418 ಪ್ರದೇಶಗಳನ್ನು ಈ ನಿಟ್ಟಿನಲ್ಲಿ ಪತ್ತೆಮಾಡಲಾಗಿದೆ. ಎಡನಾಡು ಕನ್ನಟಿಪಳ್ಳ, ಮುಗು ರಸ್ತೆಯ ಪುತ್ತಿಗೆ ತೋಡು, ಪೆರ್ಣೆಯ ಕಾವೇರಿಕಣ್ಣ ತೋಡು, ಮಾನ್ಯ ಬಯಲುತೋಡು, ಪೈವಳಿಕೆ, ಮೀಂಜ ಪ್ರದೇಶಗಳ ಸರಕಾರಿ ಜಾಗದಲ್ಲಿಈ ಯೋಜನೆಯ ಮೊದಲ ಹಂತದ ಚಟುವಟಿಕೆಗಳು ಆರಂಭಗೊಂಡಿವೆ. ಈ ಪ್ರದೇಶಗಳಲ್ಲಿ ಈಗಾಗಲೇ ಇರುವ ಹಳ್ಳಗಳ ಆಳ ಹೆಚ್ಚಿಸುವ ಕಾಯಕಗಳು ನಡೆದುಬರುತ್ತಿವೆ. ಜೊತೆಗೆ ಈ ಪ್ರದೇಶಗಳ ಕರ್ಗಲ್ಲಪಾರೆ ಪ್ರದೇಶಗಳಲ್ಲಿ ನೂತನ ಹಳ್ಳಗಳ ನಿರ್ಮಾಣ ಮಾಡಲಾಗುವುದು. 
     ಮಳೆ ಆರಂಭಗೊಂಡಿರುವುದು ಕಾಯಕಕ್ಕೆ ತೊಡಕಾಗುತ್ತಿದ್ದರೂ,ಮಳೆ ಬಿಟ್ಟ ಅವಧಿಯಲ್ಲಿ ದುಡಿಮೆ ನಡೆಸಲಾಗುತ್ತಿದೆ. ಜಿಲ್ಲಾ ನಿರ್ಮಿತಿ ಕೇಂದ್ರ ಈ ಕಾಮಗಾರಿಗಳ ಮೇಲ್ನೋಟ ವಹಿಸಿದೆ. ಹಳ್ಳ ನಿರ್ಮಾಣ ವೇಳೆ ಪಾರೆ ಪ್ರದೇಶಗಳಿಂದ ಲಭಿಸುವ ಕಲ್ಲುಗಳನ್ನು ನಿರ್ಮಿತಿ ಕೇಂದ್ರದ ಬೇರೆ ಕಾಯಕಗಳಿಗಾಗಿ ಬಳಸಲಾಗುವುದು ಎಂದು ನಿರ್ಮಿತಿ ಕೇಂದ್ರದ ಕಾರ್ಯಕಾರಿ ಕಾರ್ಯದರ್ಶಿ ಆರ್.ಸಿ.ಜಯರಾಜನ್ ತಿಳಿಸಿರುವರು.
       ಲ್ಯಾಟರೈಟ್ ಪ್ರದೇಶಗಳು ಅಧಿಕವಾಗಿರುವ ಮಂಜೇಶ್ವರ ವಲಯದ ಭೌಗೋಳಿಕ ಪರಿಸ್ಥಿತಿ ಮತ್ತು ಅನಿಯಂತ್ರಿತ ಕೊಳವೆ ಬಾವಿಗಳನ್ನು ಕೊರೆಯಲಾದುದು ಭೂಗರ್ಭ ಜಲದ ಮಟ್ಟವವನ್ನು ಅಪಾಯಕಾರಿ ರೀತಿಯಲ್ಲಿ ಕಡಿಮೆಗೊಳಿಸಿದೆ. ಈ ಹಿನ್ನೆಲೆಯನ್ನು ಗಂಭೀರವಾಗಿ ಪರಿಶೀಲಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಆದೇಶ ಪ್ರಕಾರ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಯೋಜನೆ ಜಾರಿಗೋಲ್ಳಲಿದೆ. ಈ ಯೋಜನೆಯ ಪ್ರಕಾರ ಕಿರುಕೆರೆ, ಸಲಸಂಗ್ರಹಾಗಾರ, ಹಳ್ಳ ಇತ್ಯಾದಿಗಳ ನಿರ್ಮಾಣ ನಡೆಯಲಿದೆ.
    ನದಿ ಜಲದ ಸ್ವಾಭಾವಿಕ ಹರಿವನ್ನು ಬಳಸಿ ನದಿಗಳಲ್ಲಿ ಹತ್ತರಿಂದ ಹದಿನೈದು ಡಿಗ್ರಿ ವರೆಗಿನ ಅಂತರದಲ್ಲಿ ನೂತನ ಕಾಲುವೆಗಳನ್ನು ನಿರ್ಮಿಸಿ ಈ ಹಿಂದೆಯೇ ನಿಗದಿ ಪಡಿಸಿರುವ ಜಲಸಂಗ್ರಹಾಗಾರಕ್ಕೆ ನೀರನ್ನು ಸರಬರಾಜು ನಡೆಸುವುದು ಈ ಯೋಜನೆಯ ಉದ್ದೇಶ. ಕನಿಷ್ಠ 7:9:3 ಮೀಟರ್ ಅಳತೆಯಲ್ಲಿ ಕುಳಿಗಳನ್ನು ನಿರ್ಮಿಸಲಾಗುವುದು. ಜಾಗದ ಲಭ್ಯತೆಗೆ ಅನುಗುಣವಾಗಿ ಕುಳಿಯ ಆಳ, ಅಗಲಗಳನ್ನು ಹೆಚ್ಚಿಸಲಾಗುವುದು. ಈ ಮೂಲಕ ಸಮೀಪ ಪ್ರದೇಶಗಳ ಜಲದಮಟ್ಟ ಹೆಚ್ಚಳ ಸಾಧ್ಯವಾಗುತ್ತದೆ ಎಂದು ನಿರೀಕ್ಷಿಲಾಗಿದೆ. ಮೊದಲ ಮೂರು ವರ್ಷಗಳಲ್ಲಿ ಜಲಸಂಗ್ರಹಾಗಾರಗಳಲ್ಲಿ ನೀರು ಕಟ್ಟಿನಿಲ್ಲಲು ಸಾಧಯವಾಗದೇ ಇದ್ದರೂ, ಮುಂದಿನ 5 ವರ್ಷಗಳಲ್ಲಿ ಜಲಮಟ್ಟದಲ್ಲಿ ಗಣನೀಯ ಹೆಚ್ಚಳ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಅಧಿಕ ನೀರುಲಭಿಸುವ ಪ್ರದೇಶಗಳಲ್ಲಿ ಮತ್ತೆ ಕಾಲುವೆ ನಿರ್ಮಿಸಿ ನೂತನ ಕೆರೆ, ಜಲಸಂಗ್ರಹಾಗಾರ ನಿರ್ಮಿಸಲಾಗುವುದು. ಈ ಯೋಜನೆಯ ಮೂಲಕ ಮುಂದಿನ ವರ್ಷಗಳಲ್ಲಿ ಮಂಜೇಶ್ವರ, ಕಾಸರಗೋಡು ತಾಲೂಕುಗಳಲ್ಲಿ 5 ಸಾವಿರ ಕೆರೆಗಳನ್ನು ನಿರ್ಮಿಸುವ ಉದ್ದೇಶ ಇರಿಸಲಾಗಿದೆ. ಯೋಜನೆಗೆ ಬೇಕಾದ ನಿಧಿ ಕಾಸರಗೋಡು ಅಭಿವೃದ್ಧಿಪ್ಯಾಕೇಜ್ ನಿಂದ ಲಭಿಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries