HEALTH TIPS

ಆಧಾರ್ ಲಿಂಕ್ ಮಾಡದವರಿಗೆ ಸೆ.30ರಿಂದ ಪಡಿತರ ಇಲ್ಲ


        ಕುಂಬಳೆ: ಪಡಿತರ ಕಾರ್ಡ್‍ನೊಂದಿಗೆ ಆಧಾರ್ ಕಾರ್ಡನ್ನು ಲಿಂಗ್ ಮಾಡದವರಿಗೆ ಸೆ.30ರ ಬಳಿಕ ಪಡಿತರ ಉತ್ಪನ್ನಗಳನ್ನು ನೀಡಬೇಕಾಗಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಪಡಿತರ ಕಾರ್ಡಿನ ಮಾಲೀಕರು ಹಾಗೂ ಕುಟುಂಬದ ಸದಸ್ಯರು ಆಧಾರ್ ಲಿಂಕ್ ಮಾಡಬೇಕು. ಕೇರಳದಲ್ಲಿಶೇ.99 ಪಡಿತರ ಕಾರ್ಡ್ ಮಾಲೀಕರು ಹಾಗೂ ಶೇ.85 ಸದಸ್ಯರು ಪಡಿತರ ಕಾರ್ಡಿನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದಾರೆ.
     ಆಧಾರ್ ಕಾರ್ಡ್ ಲಿಂಕ್ ಮಾಡದವರಿಗೆ ಪಡಿತರ ಸಾಮಗ್ರಿಗಳು ಲಭಿಸುವುದಿಲ್ಲವಾದರೂ ಅವರ ಹೆಸರನ್ನು ಕಾರ್ಡಿನಿಂದ ಅಳಿಸುವುದಿಲ್ಲ. 2016ರಲ್ಲಿಆಹಾರ ಭದ್ರತಾ ನಿಯಮ ಬಾಧಕಗೊಳಿಸಿದಂದಿನಿಂದ ಆಧಾರ್ ಲಿಂಕ್ ಮಾಡಬೇಕು ಎಂಬ ನಿಬಂಧನೆ ಇದೆ. ಆಹಾರ ಧಾನ್ಯಗಳು ನಿಜವಾದ ಹಕ್ಕುದಾರರಿಗೆ ಲಭಿಸುತ್ತದೆಯೋ ಎಂದು ಕಾತರಿಪಡಿಸಲು ಈ ನಿಯಮವನ್ನು ತರಲಾಗಿದೆ.
     ಆಧಾರ್ ಲಿಂಕ್ ಮಾಡುವುದು ಹೇಗೆ?
* ಆಧಾರ್ ಕಾರ್ಡ್ ಹಾಗೂ ಪಡಿತರ ಕಾರ್ಡಿನೊಂದಿಗೆ ಪಡಿತರ ಅಂಗಡಿಗೆ ತೆರಳಿ ಇ-ಪೋಸ್ ಯಂತ್ರದ ಮೂಲಕ ಲಿಂಕ್ ಮಾಡಬೇಕಿದೆ.
* ಆಧಾರ್ ನಂಬ್ರ ಹಾಗೂ ದೂರವಾಣಿ ನಂಬ್ರ ಸೇರ್ಪಡಿಸಲು ತಾಲೂಕು ಸಪ್ಲೆತ್ರ? ಕಚೇರಿ, ಸಿಟಿ ರೇಶನಿಂಗ್ ಕಚೇರಿ ಎಂಬೆಡೆಗಳಲ್ಲಿಆಧಾರ್, ರೇಶನ್ ಕಾರ್ಡ್‍ಗಳನ್ನು ಹಾಜರುಪಡಿಸಬೇಕಿದೆ. ಫೋನ್ ನಂಬ್ರ ಲಿಂಕ್ ಮಾಡಿದರೆ ಪಡಿತರ ಸಾಮಗ್ರಿಗಳ ಕುರಿತು ಎಸ್‍ಎಂಎಸ್ ಲಭಿಸಲಿದೆ.
     ವೆಬ್‍ಸೈಟ್ ಮೂಲಕ ಆನ್‍ಲೈನ್ ಲಿಂಕ್ ಮಾಡಬಹುದಾಗಿದೆ. ಕಾರ್ಡಿನ ಕನಿಷ್ಠ ಒಬ್ಬ ಸದಸ್ಯ ಆಧಾರ್ ಲಿಂಕ್ ಮಾಡಿದ್ದರೆ ಮಾತ್ರವೇ ಈ ಸೌಕರ್ಯ ಲಭ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 0471-2322155 ದೂರವಾಣಿ ಸಂಖ್ಯೆಯನ್ನು ಸಂಪಕಿಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries