ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ ಮಾತೃಮಂಡಳಿ ಉಪಖಂಡ ಸಮಿತಿ ಸಂತಡ್ಕ ಇದರ ನೇತೃತ್ವದಲ್ಲಿ 16ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆಯು ಶ್ರೀ ಅರಸು ಸಂಕಲ ದೈವಕ್ಷೇತ್ರ ಸಂತಡ್ಕದಲ್ಲಿ ಶುಕ್ರವಾರ ಜರಗಿತು. ಇದರ ಅಂಗವಾಗಿ ನಡೆದ ಧಾರ್ಮಿಕ ಸಭೆಯು ಶ್ರೀ ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಇದರ ಅಧ್ಯಕ್ಷ ಡಾ.ಎಂ.ಶ್ರೀಧರ ಭಟ್ ಅಧ್ಯಕ್ಷತೆಯಲ್ಲಿ ಜರಗಿತು.
ಸಮಾರಂಭದಲ್ಲಿ ಧಾರ್ಮಿಕ ಭಾಷಣ ಮಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ್ ಬಾಡೂರು ಅವರು, ಒಳ್ಳೆಯ ಮನಸ್ಸು, ಒಳ್ಳೆಯ ಮಾತು, ಒಳ್ಳೆಯ ಸಂಸ್ಕøತಿಗಳಿದ್ದಲ್ಲಿ ಲಕ್ಷ್ಮೀ ನಿರಂತರವಾಗಿ ನೆಲೆಸಿರುತ್ತಾಳೆ. ಇವೆಲ್ಲದರ ಮುಂದೆ ಮುಖ್ಯ ಪಾತ್ರ ವಹಿಸುವವಳು ಮಾತೆ. ಅಂತಹ ಮಾತೆಯು ಭಕ್ತಿ ಶ್ರದ್ದೆಯಿಂದ ವರಮಹಾಲಕ್ಷ್ಮೀಯನ್ನು ಪೂಜಿಸಿ ಅದನ್ನು ಒಂದು ದಿನಕ್ಕೆ ಸೀಮಿತವಾಗಿಸದೆ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಪ್ರತಿಯೊಬ್ಬರ ಜೀವನ ಪಾವನವಾಗುವುದು. ಲೋಕ ಕಲ್ಯಾಣವಾಗುವುದು ಎಂದರು. ಸಂಸ್ಕøತಿ ಉಳಿಯಬೇಕೆಂದರೆ ಮುಖ್ಯ ಪಾತ್ರ ತಾಯಂದಿರು ವಹಿಸಬೇಕು ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ದಂತವೈದ್ಯೆ ಡಾ.ರೂಪಾ, ಡಾ.ಜಯಪ್ರಕಾಶ ನಾರಾಯಣ ತೊಟೆತ್ತೋಡಿ ಉಪಸ್ಥಿತರಿದ್ದು ಶುಭಹಾರೈಸಿದರು. ಆಶಾಲತ ಬಿ.ಎಮ್ ಸ್ವಾಗತಿಸಿ, ಜಯಲಕ್ಷ್ಮೀ ಚಿಗುರುಪಾದೆ ವಂದಿಸಿದರು. ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ವೇದಮೂರ್ತಿ ಕುರಿಯ ರಾಮಮೂರ್ತಿ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ನೆರವೇರಿತು. ಬಳಿಕ ಅನ್ನಸಂತರ್ಪಣೆ ಜರಗಿತು.


