HEALTH TIPS

ಕಾಸರಗೋಡು ದಸರಾ ಸಂಭ್ರಮ ಸೆ.29ರಂದು

       ಕಾಸರಗೋಡು : ಕಾಸರಗೋಡಿನ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಕಾಸರಗೋಡು ದಸರಾ-2019 ಎಂಬ ಕಾಸರಗೋಡು ಜಿಲ್ಲಾ ಮಟ್ಟದ ಸಾಂಸ್ಕøತಿಕ ಹಾಗೂ ಸಾಹಿತ್ಯ ದಸರಾ ಉತ್ಸವವು ಸೆ.29ರಂದು ಅಪರಾಹ್ನ 3 ಗಂಟೆಯಿಂದ ಕಾಸರಗೋಡು ಜೆಪಿ ಕಾಲನಿ ಕನ್ನಡ ಗ್ರಾಮದಲ್ಲಿ ನಡೆಯಲಿದೆ.
    ಮಂಗಳೂರಿನ ಕ್ಯಾಷ್ಟನ್ ಗಣೇಶ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸುವರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಡಿವೈಎಸ್‍ಪಿ ಹರಿಶ್ಚಂದ್ರ ನಾಯ್ಕ್, ಮಲ್ಪೆ ಕರಾವಳಿ ಕಾವಲು ಪಡೆ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ, ಸಿನೆಮಾ ಪರ್ತಕರ್ತ ಬೆಂಗಳೂರಿನ ಗಣೇಶ್ ಕಾಸರಗೋಡು, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಸುರೇಶ್, ಬಿಜೆಪಿ ಮುಖಂಡರಾದ ಕೆ ಸುರೇಂದ್ರನ್, ಪ್ರಮೀಳಾ ಸಿ ನಾಯ್ಕ್, ವಕೀಲ ಕೆ ಶ್ರೀಕಾಂತ್, ವಕೀಲ ವಿ ಬಾಲಕೃಷ್ಣ ಶೆಟ್ಟಿ ಮೊದಲಾದವರು ಭಾಗವಹಿಸುವರು. ಎಣ್ಮಕಜೆ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ ಎ ಪೆರ್ಲ ದಸರಾ ಹಬ್ಬದ ಕುರಿತು ವಿಶೇಷ ಉಪನ್ಯಾಸ ನೀಡುವರು. ಈ ಸಂದರ್ಭದಲ್ಲಿ ಕೇರಳ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎಸ್ ಕುಮಾರ್, ಉದ್ಯಮಿಗಳಾದ ಕೆ ಗಣೇಶ್ ನಾಯ್ಕ್ ಕಾಸರಗೋಡು, ಲವ ಮೀಪುಗುರಿ, ಕೆ ಚಂದ್ರಶೇಖರನ್ ನಾಯರ್ ಕಾಸರಗೋಡು ಅವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಸಂಜೆ 4.30ರಿಂದ ಕಾಸರಗೋಡು ಮಕ್ಕಳ ದಸರಾ ಕಾರ್ಯಕ್ರಮ ನಡೆಯಲಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಬಾಲ ಕಲಾವಿದರಾದ ಮೂಡುಬಿದಿರೆಯ ಆರಾಧನಾ ನಿಡ್ಡೋಡಿ, ಪ್ರಕೃತಿ ಮಾರೂರು, ಸಂಕೇತ್ ಮರಿಯಾಡಿ, ಸನ್ವಿತ್ ಕುಲಾಲ್, ಕಾರ್ಕಳದ ಅವನೀ ಉಪಾಧ್ಯ, ಸೃಷ್ಟಿ ಆರ್ ಶೆಟ್ಟಿ ರೆಂಜಾಳ, ಅಧ್ವಿಕಾ ಶೆಟ್ಟಿ ಸುರತ್ಕಲ್, ಸೃಜನ್ಯಾ ಜೆ ಕೆ ಹೋಮಲ್ಕೆ ಬೆಳುವಾಯಿ, ಆದ್ಯ ಎ ಮಂಗಳೂರು ಅವರಿಂದ ಡಾ. ಶೇಖರ ಅಜೆಕಾರು ನಿರ್ದೇಶನದಲ್ಲಿ ಕಲಾ ಪ್ರದರ್ಶನ ನಡೆಯಲಿದೆ. ಸಂಜೆ 6ರಿಂದ ಕಾಸರಗೋಡು ದಸರಾ ಸಾಂಸ್ಕøತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries