HEALTH TIPS

ಇಂದು ಕುಂಬ್ಡಾಜೆಯಲ್ಲಿ ಚಿಣ್ಣರ ಕಲರವ


      ಬದಿಯಡ್ಕ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಆಶ್ರಯದಲ್ಲಿ ಚಿಣ್ಣರ ಕಲರವ ಕಾರ್ಯಕ್ರಮವು ಇಂದು (ಸೆ.20) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಬ್ಡಾಜೆಯಲ್ಲಿ ಬೆಳಿಗ್ಗೆ 9 ರಿಂದ ನಡೆಯಲಿದೆ.
     ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು  ಫ್ಲವರ್ಸ್ ಚಾನಲ್ ನಲ್ಲಿ ವೈವಿದ್ಯಮಯ ನೃತ್ಯ ಕಾರ್ಯಕ್ರಮದ ಮೂಲಕ ಜನಮನ ಸೆಳೆದ ನೃತ್ಯ ಪ್ರತಿಭೆ ರಿತೇಶ್ ಕೃಷ್ಣ ಬೆಳ್ಳೂರು ಉದ್ಘಾಟಿಸುವನು. ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್, ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಖಾಸಿಮ್, ಮುಖ್ಯೋಪಾಧ್ಯಾಯ ಬಾಲಕೃಷ್ಣ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮೊಯ್ದು, ಶಾಲಿನಿ, ಶೆರೀಫ್, ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ರೇಶ್ಮಾ ಸುನಿಲ್, ಜಯಲಕ್ಷ್ಮಿ ಮುಳ್ಳೇರಿಯ, ವಿದ್ಯಾಗಣೇಶ್ ಅಣಂಗೂರ್ ಉಪಸ್ಥಿತರಿರುವರು.ಸಂಧ್ಯಾಗೀತಾ ಬಾಯಾರು ತರಗತಿ ನಡೆಸುವರು.
ಚಿಣ್ಣರ ಕಲರವ ಉದ್ಘಾಟಿಸಲಿರುವ ಬಾಲ ಪ್ರತಿಭೆ ರತೀಶ್ ಕೃಷ್ಣ ಬೆಳ್ಳೂರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries