HEALTH TIPS

ಕುಂಬಳೆ ಕೃಷ್ಣ ನಗರದಲ್ಲಿ ಜನ ಜಾಗ್ರತಿ ಶಿಬಿರ


     ಕುಂಬಳೆ: ಕುಂಬಳೆ ಜನ ಮೈತ್ರಿ ಪೊಲೀಸ್ ಹಾಗು ಕೃಷ್ಣ ನಗರದ ನಾಗರಿಕರಿಂದ ಕುಂಬಳೆ ಕೃಷ್ಣ ನಗರದ ಮೌನೇಶ್ ಮಂದಿರದಲ್ಲಿ ಜನಜಾಗ್ರತಿ ಶಿಬಿರ ಮಂಗಳವಾರ ನಡೆಯಿತು. ಗ್ರಾಮ  ಪಂಚಾಯತಿ ಸದಸ್ಯ ಕೆ.ಸುಜಿತ್ ರೈ ಜನಜಾಗೃತಿ ಶಿಬಿರ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ ಕೃಷ್ಣ ನಗರ ಪ್ರದೇಶದಲ್ಲಿ ರಾತ್ರಿ ವೇಳೆ ನಡೆಯುವ ಸಮಾಜ ದ್ರೋಹಿಗಳ ಅಟ್ಟಹಾಸವನ್ನು ತಡೆಯಲು ನಾಗರಿಕರು ಒಗ್ಗಟ್ಟಾಗಬೇಕೆಂದು ಅವರು ತಿಳಿಸಿದರು.
       ಬಳಿಕ ನಡೆದ ತಿಳುವಳಿಕ ತರಬೇತಿಯನ್ನು ಕುಂಬಳೆ ಜನ ಮೈತ್ರಿ ಹಿರಿಯ ನಾಗರಿಕ ಪೊಲೀಸ್ ಅಧಿಕಾರಿ ಪ್ರಕಾಶ್.ಕೆ. ಅವರು ನಿರ್ವಹಿಸಿದರು.  ಕಾರ್ಯಕ್ರಮದಲ್ಲಿ ಪರಿಸರದ ಹಿರಿಯರಾದ ವಿಠ್ಠಲ್ ಆಚಾರ್ಯ, ಕೃಷ್ಣ ಎ.ಕೆ, ಜಯಕುಮಾರ್, ಕೃಷ್ಣ ಮಾಸ್ತರ್, ನಾಗೇಶ್, ಪೊಲೀಸ್ ಅಧಿಕಾರಿ ವಿನೀತ್   ಹಾಗು ಹೆಚ್ಚಿನ ಸಂಖ್ಯೆಯ ನಾಗರಿಕರು ಭಾಗವಹಿಸಿದ್ದರು.  ಕೆ.ಗಣೇಶ್ ಆಚಾರ್ಯ ಸ್ವಾಗತಿಸಿ, ಮನೋಜ್ ಮಾಸ್ತರ್ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries