HEALTH TIPS

ದಕ್ಷಿಣದ ಕನ್ನಡ ನೆಲ ದುರ್ಗದ ವಶಕ್ಕೆ ಹೀಗೊಂದು ಯತ್ನ- ಹೊಸದುರ್ಗ ಶಾಲೆಗೆ ಮಲಯಾಳಿ ಅಧ್ಯಾಪಕ ಕಳ್ಳರಂತೆ ಹಾಜರು-


          ಕಾಸರಗೋಡು: ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗಣಿತ ಅಧ್ಯಾಪಕನಾಗಿ ನೇಮಕಗೊಂಡ ಕನ್ನಡ ತಿಳಿಯದ ಅಧ್ಯಾಪಕ ಬುಧವಾರ ಶಾಲೆಗೆ ಹಾಜರಾಗಿದ್ದಾರೆ. ಕನ್ನಡದ ಗಂಧಗಾಳಿಯಿಲ್ಲದ ಮಲಯಾಳಿ ಅಧ್ಯಾಪಕ ದೀಪು ಶಾಲೆಗೆ ಜೋಯಿನ್ ಆಗಿದ್ದಾರೆ. ಇದರಿಂದ ಕನ್ನಡ ವಿದ್ಯಾರ್ಥಿಗಳು ಸಂಕಷ್ಟಕ್ಕೆ ತುತ್ತಾಗಲಿದ್ದಾರೆ.
     ಇದರ ವಿರುದ್ಧ ನಾಳೆ(ಅ.31) ಶಾಲಾ ವಿದ್ಯಾರ್ಥಿಗಳು ಮತ್ತು ಮಕ್ಕಳ ಹೆತ್ತವರು ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.
    ಗೊತ್ತಾಗದೆ ನುಸುಳುವಿಕೆ:
   ಹೊಸದುರ್ಗ ಕಾಸರಗೋಡಿನ ದಕ್ಷಿಣ ತುದಿಯ ಪ್ರದೇಶವಾಗಿದ್ದು, ಇಲ್ಲಿಯ ಸರ್ಕಾರಿ ಶಾಲೆಯಲ್ಲಿ ನೂರಾರು ಕನ್ನಡ ಮಕ್ಕಳು ಬಹುಸಂಖ್ಯೆಯ ಮಲೆಯಾಳಿಗರ ಮಧ್ಯೆ ವ್ಯಾಸಂಗ ಮಾಡುತ್ತಿದ್ದಾರೆ. ಬುಧವಾರ ಗಣಿತ ಬೋಧಿಸಲು ಆಗಮಿಸಿದ ಶಿಕ್ಷಕ ತರಗತಿಗೆ ಬಂದಾಗಲಷ್ಟೆ ಆತ ಮಲೆಯಾಳ ಮಾತ್ರ ಅರಿವಿರುವ ಶಿಕ್ಷಕ ಎಂದು ತಿಳಿದುಬಂತು. ಆ ಶಾಲೆಯ ಮುಖ್ಯೋಪಾಧ್ಯಾಯರು ಮಲೆಯಾಳಿ ಆಗಿದ್ದರಿಂದ ಆರಂಭದಲ್ಲಿ ಹೊರ ಪ್ರಪಂಚಕ್ಕೆ ಅರಿವಾಗುವಲ್ಲಿ ತಡವಾಗಿ ಬುಧವಾರ ಆ ಶಿಕ್ಷಕ ಉದ್ಯೋಗಕ್ಕೆ ಹಾಜರಾಗುವಂತಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries