ಬದಿಯಡ್ಕ: ಬೊಳ್ಳಿ ಪ್ರಕಾಶನ ಸುರತ್ಕಲ್-ಮಂಗಳೂರು ಇದರ ಆಶ್ರಯದಲ್ಲಿ ಯುವ ಕವಯತ್ರಿ ಶ್ವೇತಾ ಕಜೆ ಅವರ ಸತ್ಯೊದ ಮೈಮೆ ತುಳು ಕಾದಂಬರಿಯ ಬಿಡುಗಡೆ ಇಂದು(ಅ.2) ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ರಿಂದ ಜರಗುವ ಸಭಾ ಕಾರ್ಯಕ್ರಮವನ್ನು ಸ್ಚಾಮಿಕೃಪಾ ತರವಾಡಿನ ಕೊರಗಜ್ಜ ದೈವದ ಪಾತ್ರಿ ಕಿಶೋರ್ ಕುಮಾರ್ ಕನ್ನೆಪ್ಪಾಡಿ ಉದ್ಘಾಟಿಸುವರು. ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ ಸಭೆಯ ಅಧ್ಯಕ್ಷತೆ ವಹಿಸುವರು.
ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕ ಕುಂಞÂರಾಮ ಮಣಿಯಾಣಿ.ಬಿ ಪುಸ್ತಕವನ್ನು ಬಿಡುಗಡೆಗೊಳಿಸಲಿರುವರು. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಮಾಜಿ ಸದಸ್ಯೆ ವಿದ್ಯಾಶ್ರೀ ಎಸ್ ಉಳ್ಳಾಲ್ ಕೃತಿ ಪರಿಚಯಿಸುವರು. ಕೇರಳ ತುಳು ಅಕಾಡೆಮಿ ಸದಸ್ಯ, ಪತ್ರಕರ್ತ
ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಮೌನ ಕೋಗಿಲೆ ಸಂವಾಹಕ ಸಮೂಹದ ಕಿಶೋರ್ ಎಕ್ಕಾರ್, ಬೊಳ್ಳಿ ಪ್ರಕಾಶನದ ಸಂಗೀತಾ ಶರತ್ ಶೆಟ್ಟಿ ಸುರತ್ಕಲ್, ಕೃತಿಕಾರ್ತಿ ಶ್ವೇತಾ ಕಜೆ, ಗಜಲ್ ಕವಯತ್ರಿ ಚೇತನಾ ಕುಂಬ್ಳೆ ಮೊದಲಾದವರು ಸಭೆಯಲ್ಲಿ ಉಪಸ್ಥಿತಿತರಿರುವರು.