HEALTH TIPS

13 ವರ್ಷಗಳ ನಂತರ ಸುಪ್ರೀಂ ಕೊಲಿಜಿಯಂಗೆ ಮಹಿಳಾ ನ್ಯಾಯಮೂರ್ತಿ ನೇಮಕ

   
    ನವದೆಹಲಿ: ನ್ಯಾ. ಆರ್.ಭಾನುಮತಿ ಅವರು ಸುಪ್ರಿ?ಂ ಕೋರ್ಟ್ ಕೊಲಿಜಿಯಂಗೆ ನೇಮಕ­ಗೊಂಡಿದ್ದು 13 ವರ್ಷ ನಂತರ ಮಹಿಳಾ ನ್ಯಾಯಮೂರ್ತಿಯೊಬ್ಬರು ಕೊಲಿಜಿಯಂನಲ್ಲಿ ಸ್ಥಾನ ಪಡೆದಿದ್ದಾರೆ. ಹಿರಿತನದ ಆಧಾರದ ಮೇಲೆ ಕೊಲಿಜಿಯಂಗೆ ನೇಮಕ ಮಾಡಲಾಗುತ್ತದೆ.
    ಹಾಲಿ ನ್ಯಾಯ­ಮೂರ್ತಿಗಳ ಪೈಕಿ ಹಿರಿತನದಲ್ಲಿ 5ನೇಯವರಾಗಿರುವ ನ್ಯಾ.ಭಾನು­ಮತಿ ಅವರು ಸಿಜೆಐ ಗೊಗೊಯ್ ಅವರ ನಿವೃತ್ತಿ ನಂತರ ಕೊಲಿಜಿಯಂಗೆ ನೇಮಕಗೊಂಡಿದ್ದಾರೆ. ಅವರ ಸೇವಾವಧಿ 2020ರ ಜುಲೈ 19ರವರೆಗೆ ಇದೆ. ಸಿಜೆಐ ಎಸ್. ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎನ್. ವಿ ರಮಣ, ಅರುಣ್ ಮಿಶ್ರಾ, ಆರ್.ಎಫ್. ನಾರಿಮನ್ ಮತ್ತು ಆರ್. ಭಾನುಮತಿ ಅವರು ಹಾಲಿ ಕೊಲಿಜಿಯಂ ಸದಸ್ಯರು.
           ನೇರ ನೇಮಕದಲ್ಲಿ ಆಯ್ಕೆ:
   ತಮಿಳುನಾಡು ಮೂಲದ ನ್ಯಾ.ಭಾನುಮತಿ ಅವರು ತಿರುಪತ್ತೂರು, ಕೃಷ್ಣಗಿರಿ ಕೋರ್ಟ್‍ಗಳಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. 1988ರಲ್ಲಿನೇರ ನೇಮಕಾತಿ ಮೂಲಕ ಜಿಲ್ಲಾನ್ಯಾಯಾಧೀಶರಾಗಿ ನೇಮಕಗೊಂಡು ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿಸೇವೆ ಸಲ್ಲಿಸಿದ್ದಾರೆ. 2003ರ ಏ. 3ರಂದು ಮದ್ರಾಸ್ ಹೈಕೋರ್ಟ್ ನ್ಯಾಯ­ಮೂರ್ತಿಯಾಗಿ ಬಡ್ತಿ ಪಡೆದ ಅವರು, 2013ರ ನ.16­ರಂದು ಜಾಖರ್ಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ­ಯಾಗಿ ನೇಮಕಗೊಂಡರು.2014ರ ಆ.13ರಿಂದ ಸುಪ್ರಿ?ಂ ಕೋರ್ಟ್ ನ್ಯಾಯಮೂರ್ತಿ­ಯಾಗಿದ್ದಾರೆ. ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ನೀಡಿದ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲಿನ್ಯಾ. ಭಾನುಮತಿ ಕೂಡ ಒಬ್ಬರು.
    ಮಧ್ಯಪ್ರದೇಶ ಹೈಕೋರ್ಟ್‍ನ ಜಡ್ಜ್ ಎಸ್.ಕೆ. ಗಂಗಲೆ ವಿರುದ್ಧದ ಲೈಂಗಿಕ ಕಿರು­ಕುಳ ಆರೋಪದ ಬಗ್ಗೆ ತನಿಖೆ ನಡೆಸಲು ಅಂದಿನ ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿ ರಚಿಸಿದ ವಿಚಾರಣಾ ಸಮಿತಿ ಮುಂದಾಳತ್ವವನ್ನು ಭಾನುಮತಿ ವಹಿಸಿದ್ದರು.  ಸಮಿತಿಯು ಗಂಗಲೆ ಅವರಿಗೆ ಕ್ಲಿ?ನ್‍ಚಿಟ್ ನೀಡಿದೆ. ಕೊಲೆಜಿಯಂನ ಕೊನೆಯ ಮಹಿಳಾ ನ್ಯಾಯಮೂರ್ತಿಯಾಗಿದ್ದವರು ನ್ಯಾ. ರುಮಾ ಪಾಲ್.  ಅವರು ಜೂ 2, 2006 ರಂದು ನಿವೃತ್ತರಾದ 14 ವರ್ಷಗಳ ನಂತರ ನ್ಯಾ. ಭಾನುಮತಿ ಕೊಲಿಜಿಯಂನಲ್ಲಿ ಸ್ಥಾನ ಪಡೆದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries