ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಎರ್ನಾಕುಳಂ ಜಿಲ್ಲೆಯ ವಾಯಕ್ಕುಳಂನಲ್ಲಿ ಜರಗಿದ ಕೇರಳ ರಾಜ್ಯಮಟ್ಟದ ಸಿಬಿಎಸ್ಇ ಸಹೋದಯ ಕಲೋತ್ಸವದಲ್ಲಿ ಹುಡುಗರ ಭರತನಾಟ್ಯ ವಿಭಾಗದಲ್ಲಿ ಸಾಕೇತ ರಾಜ್ ಪಟ್ಟಾಜೆ ಎ ಶ್ರೇಣಿ ಪಡೆದಿರುತ್ತಾನೆ. ಬದಿಯಡ್ಕ ಹೋಲಿ ಫ್ಯಾಮಿಲಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾದ ಈತ ಪದ್ಮರಾಜ ಪಟ್ಟಾಜೆ ಹಾಗೂ ಅಶ್ವಿನಿ ರಾಜ್ ದಂಪತಿಗಳ ಪುತ್ರ. ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಹಾಗೂ ಸತ್ಯನಾರಾಯಣ ರಾಜು ಬೆಂಗಳೂರು ಅವರ ಶಿಷ್ಯ. ಭರತನಾಟ್ಯದಲ್ಲಿ ವಿವಿಧೆಡೆ ಕಾರ್ಯಕ್ರಮಗಳನ್ನು ನೀಡಿದ ಈತ ಅನೇಕ ಪ್ರಶಸ್ತಿಗಳನ್ನೂ ಗಳಿಸಿರುತ್ತಾನೆ.


