ಕುಂಬಳೆ: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳಿಗೆ ಆಹಾರದ ಪೂರೈಕೆಗಾಗಿ ಗೋವಿಗಾಗಿ ಮೇವು - ಸೇವಾ ಅಘ್ರ್ಯ - ಶ್ರಮಾದಾನ ಕಾರ್ಯವು ಮುಳ್ಳೇರಿಯಾ ಹವ್ಯಕ ಮಂಡಲದ ಕುಂಬ್ಳೆ ವಲಯದ ಕಳತ್ತೂರು ಕಾರಿಂಜ ಹಳೆಮನೆ ಗೋಪಾಲಕೃಷ್ಣ ಭಟ್ಟರ ಮನೆಯ ಹಿತ್ತಿಲಿನಲ್ಲಿ ಇತ್ತೀಚೆಗೆ ಗುರುವಂದನೆ, ಗೋವಂದನೆಯೊಂದಿಗೆ ಜರಗಿತು.
ಮುಳ್ಳೆರಿಯ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಗುರುಮೂರ್ತಿ ಮೇಣ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಾತೃತ್ವಂ ವಿಭಾಗದ ಕಂಬಾರು ಘಟಕದ ಸಂಚಾಲಕಿ ಸುಲೋಚನಾ ಬೆಜಪ್ಪೆಯ ನೇತೃತ್ವದಲ್ಲಿ ಹುಲ್ಲಿನ ಕಟಾವು ಮಾಡುವ ಕೆಲಸ ಪ್ರಾರಂಭ ಮಾಡಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಮ, ಬಾಬು, ಜಯಂತಿ, ಹರಿಣಾಕ್ಷಿ, ಬೇಬಿ, ಸರಸ್ವತಿ, ಕುಸುಮ ಸಹಕರಿಸಿದರು. ಮಾತೃತ್ವಂ ವಿಭಾಗದ ಅಧ್ಯಕ್ಷೆ ಈಶ್ವರೀ ಶ್ಯಾಮ ಭಟ್ ಬೇರ್ಕಡವು, ಮಂಡಲದ ಸಂಘಟನಾಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ, ಗೋಶಾಲೆ ಕಾರ್ಯದರ್ಶಿ ಶ್ರೀಧರ ಭಟ್, ಗೋಬಂಧುಗಳಾದ ಶಂಕರನಾಯಣನ್ ಗುಂಪೆ, ಶಿವರಾಮ ಭಟ್ ಕಾರಿಂಜ, ರಾಮ ಭಟ್ ಕಾರಿಂಜ, ಡಾ.ಮಾಲತಿಪ್ರಕಾಶ, ಡಾ.ಪ್ರಕಾಶ, ರಮೇಶ ಭಟ್ ವೈ.ವಿ. ವಿದ್ಯಾನಗರ, ಸವಿತಾ ಆರ್ ಭಟ್, ಮಹೇಶ ಮನ್ನಿಪಾಡಿ, ಚಂದ್ರಾವತಿ ಮನ್ನಿಪಾಡಿ, ಕಿರಣಮೂರ್ತಿ ಬದಿಯಡ್ಕ, ಈಶ್ವರ ಭಟ್, ಶ್ರೀರಾಮ ಶರ್ಮ, ಶಾರದ, ಜಾಹ್ನವಿ, ಉಷಾ ಶಿವರಾಮ ಭಟ್ ಕಾರಿಂಜ ಸಹಕರಿಸಿದರು.
ಬೆಜಪ್ಪೆ ಚಂದ್ರಶೇಖರ ಭಟ್, ಕಾರಿಂಜ ಶಿವರಾಮ ಹುಲ್ಲು ಕಟಾವು ಯಂತ್ರ ನೀಡಿದರು. ಕಾರಿಂಜ ಗೋಪಾಲಕೃಷ್ಣ ಭಟ್ ಮನೆಯವರು ಕಾರ್ಯಕರ್ತರಿಗೆ ಉಪಾಹಾರ ವ್ಯವಸ್ಥೆಯನ್ನು ಮಾಡಿದರು. ಇದೇ ಸಂದರ್ಭದಲ್ಲಿ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ಇವರು ತಮ್ಮ ಪುತ್ರ ರಾಮ ಶರ್ಮನ ಜನ್ಮದಿನದ ಅಂಗವಾಗಿ ಗೋಶಾಲೆಗೆ ಸಾಗಟದ ವೆಚ್ಚವನ್ನು ವಹಿಸಿ ಸಹಕರಿಸಿದರು.


