ಮಂಜೇಶ್ವರ: ಸುಂಕದಕಟ್ಟೆಯ ವಿಶ್ವಪ್ರಭಾ ಸಭಾಂಗಣದಲ್ಲಿ ಇಂದು(ಗುರುವಾರ)ಸಂಜೆ 4 ಕ್ಕೆ ವರ್ಕಾಡಿ ಪಂಚಾಯತಿ ವ್ಯಾಪ್ತಿಯ ವಿಶ್ವಕರ್ಮ ಸಮಾಜ ಭಾಂದವರ ವಿಶೇಷ ಸಭೆ ಆಯೋಜಿಸಲಾಗಿದೆ.
ಸಭೆಯಲ್ಲಿ ಪ್ರತಿಷ್ಠಾನದ ಕೇಂದ್ರೀಯ ಮಂಡಳಿಯ ಪಧಾಧಿಕಾರಿಗಳು, ಶ್ರೀ ಗುರು ಸೇವಾ ಪರಿಷತ್ ನ ಕೇಂದ್ರೀಯ ಮಂಡಳಿಯ ಪಧಾಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಲಿರುವರು. ಜೊತೆಗೆ ಮುಂಬರುವ ವರ್ಷದಲ್ಲಿ ವರ್ಕಾಡಿಯಲ್ಲಿ ಶ್ರೀಸ್ವಾಮಿಗಳವರ ಮನೆ ಮನೆ ಭೇಟಿ ಗುರುವಂದನ ಕಾರ್ಯಕ್ರಮದ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ಈ ವೇಳೆ ವರ್ಕಾಡಿ ಘಟಕದ ನೂತನ ಸಮಿತಿಯ ಪದಗ್ರಹಣ ಕೂಡ ನಡೆಯಲಿದೆ. ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಸಂಬಂಧಪಟ್ಟವರು ವಿನಂತಿಸಿದ್ದಾರೆ.

