HEALTH TIPS

ಮೊಗೇರ ಟ್ರೋಫಿ 2019 ಸಂಪನ್ನ


        ಕುಂಬಳೆ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ಕುಂಬಳೆಯ ಶೇಡಿಕಾವು ಕ್ರೀಡಾಂಗಣದಲ್ಲಿ ಅಂತರ್ ರಾಜ್ಯ ಕ್ರಿಕೆಟ್ ಪಂದ್ಯಾಟ ಮೊಗೇರ ಟ್ರೋಫಿ 2019 ಜರಗಿತು. ಕುಂಬಳೆ ಗ್ರಾಮಪಂಚಾಯಿತಿ ಸದಸ್ಯ ರಮೇಶ್ ಭಟ್ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು. ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಅಂಗಾರ ಅಜಕ್ಕೋಡು, ಕಾರ್ಯದರ್ಶಿ ಹರಿರಾಮ ಕುಳೂರು, ಜಿಲ್ಲಾ ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ, ಕೋಶಾಧಿಕಾರಿ ಗೋಪಾಲ ದರ್ಬೆತ್ತಡ್ಕ, ಸಲಹಾ ಸಮಿತಿ ಸದಸ್ಯ ಪದ್ಮನಾಭ ಚೇನಕ್ಕೋಡು, ಜೊತೆ ಕಾರ್ಯದರ್ಶಿ ಸುಂದರ ಕನಿಯಾಲ, ರವಿಕಾಂತ ಕೇಸರಿ ಕಡಾರು, ಜಿಲ್ಲಾ ಸದಸ್ಯ ಚಂದಪ್ಪ ಕಕ್ವೆ, ಶೇಡಿಕಾವು ಶಂಕರನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries