HEALTH TIPS

ಜ.18ರಿಂದ ಜಿಲ್ಲಾಧಿಕಾರಿ ನೇತೃತ್ವದ ಅದಾಲತ್

   
          ಕಾಸರಗೋಡು: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಯುವ ದೂರು ಪರಿಹಾರ ಅದಾಲತ್ ಜ.18ರಿಂದ ಜಿಲ್ಲೆಯ ವಿವಿಧೆಡೆ ನಡೆಯಲಿದೆ. ಹೊಸದುರ್ಗ ತಾಲೂಕು ಅದಾಲತ್ 18ರಂದು ಕಾಞಂಗಾಡ್ ನಗರಸಭೆ ಪುರಭವನದಲ್ಲಿ ನಡೆಯಲಿದೆ. ಜ.30ರಂದು ವೆಳ್ಳರಿಕುಂಡ್ ತಾಲೂಕು ಅದಾಲತ್ ನಡೆಯಲಿದೆ. ಈ ಸಂಬಂಧ ದೂರುಗಳಿದ್ದಲ್ಲಿ ಜ.15 ವರೆಗೆಸ್ವೀಕರಿಸಲಾಗುವುದು. ಕಾಸರಗೋಡು ತಾಲೂಕು ಅದಾಲತ್ ಫೆ.6ರಂದು ನಡೆಯಲಿದೆ. ಈ ಸಂಬಂಧ ದೂರುಗಳಿದ್ದಲ್ಲಿ ಜ.6 ವರೆಗೆ ಸ್ವೀಕರಿಸಲಾಗುವುದು. ಮಂಜೇಶ್ವರ ತಾಲೂಕು ಅದಾಲತ್ ಫೆ.13ರಂದು ನಡೆಯಲಿದೆ. ಈ ಸಂಬಂಧ ದೂರುಗಳಿದ್ದಲ್ಲಿಜ.30ವರೆಗೆ ಸ್ವೀಕರಿಸಲಾಗುವುದು. ಅದಾಲತ್ ನಲ್ಲಿ ಸಿ.ಎಂ.ಡಿ.ಆರ್.ಎಫ್ ಚಿಕಿತ್ಸಾ ಆರ್ಥಿಕ ಸಹಾಯ, ಲೈಫ್ ಮಿಷನ್ ಯೋಜನೆ, ಪಡಿತರ ಚೀಟಿಸಂಬಂಧ ದೂರುಗಳು, ಎಲ್.ಆರ್.ಎಂ. ಕೇಸುಗಳು, ಸ್ಟ್ಯಾಟ್ಯೂಟರಿಆಗಿ ಲಭಿಸಬೇಕಾದ ಪರಿಹಾರ ಉಳಿದು ಇತರ ಎಲ್ಲ ದೂರುಗಳನ್ನೂ ಸಲ್ಲಿಸಬಹುದಾಗಿದೆ. ಅದಾಲತ್ ಗಿರುವ ಅರ್ಜಿಗಳು ಅಕ್ಷಯ ಕೇಂದ್ರಗಳಲ್ಲಿ ಪ್ರತ್ಯೇಕ  ವೆಬ್ ಸೈಟ್ ಮೂಲಕ ಆನ್ ಲೈನ್ ರೂಪದಲ್ಲಿ, ತಾಲೂಕು ಕಚೇರಿಗಳಲ್ಲಿ,ತಾಲೂಕು ಕಚೇರಿ ವ್ಯಾಪ್ತಿಯ ಗ್ರಾಮಕಚೇರಿಗಳಲ್ಲಿ ನೇರವಾಗಿ ಸಲ್ಲಿಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries