HEALTH TIPS

ಕರಾವಳಿ ನಿಯಂತ್ರಣ- 21ರಂದು ಅಹವಾಲು ಸ್ವೀಕಾರ ಸಭೆ


         ಕಾಸರಗೋಡು:  ಕಾಸರಗೋಡು ಜಿಲ್ಲೆಯ ಕರಾವಳಿ ನಿಯಂತ್ರಣ ವಲಯಗಳಿಂದ ವರದಿಯಾಗಿರುವ ಕರಾವಳಿ ಕಾನೂನುಭಂಗ ಪ್ರಕರಣಗಳಿಗೆ ಸಂಬಂಧಿಸಿ 2019 ಡಿ.19ರಂದು ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯ ನಂತರ ನೂತನವಾಗಿ ನಡೆದಿರುವ ಕಾನೂನು ಭಂಗ ಪ್ರಕರಣಗಳನ್ನು ಸಂಗ್ರಹಿಸಿ ಜಿಲ್ಲಾ ವೆಬ್ ಸೈಟ್ ಆಗಿರುವಞಚಿsಚಿಡಿಚಿgoಜ.ಟಿiಛಿ.iಟಿರಲ್ಲಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ಯಾವುದಾದರೂ ಲೋಪದೋಷಗಳಿದ್ದರೆ ಸಂಬಂಧಪಟ್ಟ ದಾಖಲೆಗಳ ಸಹಿತ ಜ.21ರಂದು ಚೆರ್ಕಳ ಐಮ್ಯಾಕ್ಸ್ ಸಭಾಂಗಣದಲ್ಲಿ ನಡೆಯುವ ಅಹವಾಲು ಸ್ವಿಕಾರ ಸಭೆಯಲ್ಲಿ ಹಾಜರುಪಡಿಸಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಕಾಸರಗೋಡು, ಕಾಞಂಗಾಡ್,ನೀಲೇಶ್ವರ ನಗರಸಭೆ ವ್ಯಾಪ್ತಿಯ, ಉದುಮಾ, ಮಂಗಲ್ಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಮಂದಿಗೆ, ಮಧ್ಯಾಹ್ನ 2 ಗಂಟೆಯಿಂದ ತ್ರಿಕರಿಪುರ, ಪಳ್ಳಿಕ್ಕರೆ, ಚೆರುವತ್ತೂರು, ಚೆಮ್ನಾಡ್, ಪಡನ್ನ, ಕುಂಬಳೆ ಗ್ರಾಮಪಂಚಾಯತ್ ಗಳ ಮಂದಿಗಾಗಿ ಅಹವಾಲು ಸ್ವೀಕಾರ ಸಭೆ ಜರುಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries