ಮುಳ್ಳೇರಿಯ : ಅತೀ ಪುರಾತನವೂ ಇತಿಹಾಸ ಪ್ರಸಿದ್ಧವೂ ಆದ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ವರ್ಷಾವಧಿ ಉತ್ಸವವು ಇಂದಿನಿಂದ (ಜ. 29ರಿಂದ) ಫೆ. 2ರ ತನಕ ವೇದಮೂರ್ತಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಜ.29 ಬುಧವಾರದಂದು ಬೆಳಗ್ಗೆ ಗಣಪತಿಹವನ, ಧ್ವಜಾರೋಹಣ, ಶ್ರೀಬಲಿ, ನವಕಾಭಿಷೇಕ, ತುಲಾಭಾರ ಸೇವೆ, 11ರಿಂದ ಸಪ್ತಸ್ವರ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ ಮಹಾಪೂಜೆ, ಪ್ರಸಾದ, ಅನ್ನದಾನ, ಅಪರಾಹ್ನ 2:30ರಿಂದ ಕಯ್ಯಾರು ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಇವರಿಂದ ಯಕ್ಷಗಾನ ಕೂಟ, ಸಾಯಂ 6:30ರಿಂದ ನಾರಂಪಾಡಿ ಶ್ರೀ ಉಮಾಮಹೇಶ್ವರ ಭಜನ ಸಮಿತಿ ಮತ್ತು ಮವ್ವಾರು ಶ್ರೀ ಕೃಷ್ಣ ಭಜನ ಸಮಿತಿ ಇವರಿಂದ ಭಜನೆ, ರಾತ್ರಿ 8 ರಾತ್ರಿ ಪೂಜೆ, ಹವಿಸ್ಸು ಪೂಜೆ, ಶ್ರೀಭೂತಬಲಿ, 10:30ರಿಂದ ವಿದುಷಿ ನಿಶಿತಾ ಪುತ್ತೂರು, ಮಾ. ಸಾತ್ವಿಕ್ರಾಜ್, ಮಾ| ಸಾಕೇತ್ರಾಜ್ ಇವರಿಂದ ಭರತನಾಟ್ಯ ಜರಗಲಿದೆ.
ಜ.30ರಿಂದ ಬೆಳಗ್ಗೆ 7:30ಕ್ಕೆ ಶ್ರೀಬಲಿ, 8ರಿಂದ ಶ್ರೀ ವಿಶ್ವಪ್ರಿಯ ಮಹಿಳಾ ಭಜನ ಮಂಡಳಿ ಏತಡ್ಕ ಇವರಿಂದ ಭಜನೆ, 9:30 ರಿಂದ ಮಾ| ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು, ಮಾ| ವೆಂಕಟ ಯಶಸ್ವಿ ಕಬೆಕ್ಕೋಡು, ಮಾ| ಕಾರ್ತಿಕ್ಶ್ಯಾಂ ಮುಂಡೋಳುಮೂಲೆ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಅಪರಾಹ್ನ ಗಂ.11ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ, ಅನ್ನದಾನ, 2 ರಿಂದ ಸ್ಮøತಿಲಯಂ ಸಿಂಗರ್ಸ್ ಪೈಕ ಇವರಿಂದ ಭಕ್ತಿಗಾನಸುಧಾ, ಸಾಯಂ.ಗಂ. 6:30ರಿಂದ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಸಂಘ ಇವರಿಂದ ಭಜನೆ, 8ರಿಂದ ರಾತ್ರಿ ಪೂಜೆ, ಹವಿಸ್ಸು ಪೂಜೆ, ಶ್ರೀಭೂತಬಲಿ ನಡೆಯಲಿದೆ.
ಜ. 31ರಂದು ಬೆಳಗ್ಗೆ ಗಂ. 7:30 ಶ್ರೀಬಲಿ, 10:30ರಿಂದ ಧಾರ್ಮಿಕಸಭೆಯಲ್ಲಿ ವೇದಮೂರ್ತಿ ಪರಕ್ಕಜೆ ಅನಂತನಾರಾಯಣ ಭಟ್ಟ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ತಲೇಕ ವಹಿಸುವರು. 11ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ, ಅನ್ನದಾನ ನಡೆಯಲಿದೆ. ಅಪರಾಹ್ನ ಗಂ.2.30 ನಾರಂಪಾಡಿ ಶಿವಗಿರಿ ನಗರದ ಶಿವಗಿರಿ ಆಟ್ರ್ಸ್&ಸ್ಪೋಟ್ರ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಬೆಂಗಳೂರು ದೂರದರ್ಶನ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರಿಂದ ಭರತನಾಟ್ಯ, ಸಾಯಂ.6:30ರಿಂದ ಶ್ರೀ ಅಯ್ಯಪ್ಪಸ್ವಾಮೀ ಭಜನ ಸಂಘ, ಮಾವಿನಕಟ್ಟೆ ಇವರಿಂದ ಭಜನೆ, ರಾತ್ರಿ 8ರಿಂದ ರಾತ್ರಿ ಪೂಜೆ, ಹವಿಸ್ಸು ಪೂಜೆ, ಶ್ರೀಭೂತಬಲಿ ನಡೆಯಲಿದೆ.
ಫೆ. 01ರಂದು ಬೆಳಗ್ಗೆ 7:30ಕ್ಕೆ ಶ್ರೀಬಲಿ, 9:30ರಿಂದ ಕುಸುಮಾ ಕಾರಂತ ಹಾಗೂ ಕು| ಸುಶ್ಮಿತಾ ಕಾರಂತ ನೆಕ್ರಾಜೆ ಇವರಿಂದ ದಾಸ ಸಂಕೀರ್ತನೆ,
10:30ರಿಂದ ವಿದ್ವಾನ್ ಎ. ಈಶ್ವರ ಭಟ್ ಕಾಂಚನ ಇವರ ಶಿಷ್ಯೆ, ವಿದುಷಿ ಶ್ರೀಮತಿ ವಾಣಿಪ್ರಸಾದ್ ಕಬೆಕ್ಕೋಡು ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ, 11ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಬಲಿವಾಡು ಕೂಟ, ಪ್ರಸಾದ, ಸಂತರ್ಪಣೆ, ಅಪರಾಹ್ನ 2:30ರಿಂದ ವಿದುಷಿ ಯೋಗೇಶ್ವರೀ ಜಯಪ್ರಕಾಶ್ ವೈಷ್ಣವ ನಾಟ್ಯಾಲಯ(ರಿ) ಪುತ್ತೂರು ಇವರ ವಿದ್ಯಾರ್ಥಿಗಳಿಂದ ಭರತನಾಟ್ಯ, ಸಾಯಂ. ಗಂ.6ರಿಂದ ಶ್ರೀ ಗಂಗಾಧರ ಮಾರಾರ್ ನೀಲೇಶ್ವರ ಮತ್ತು ಬಳಗದವರಿಂದ ತಾಯಂಬಕ, 6:30ರಿಂದ ನಾರಂಪಾಡಿ ನೆಲ್ಯಡ್ಕ ಶ್ರೀ ಮೂಕಾಂಬಿಕಾ ಭಜನ ಸಂಘದವರಿಂದ ಭಜನೆ, 7:30ರಿಂದ ನಾರಂಪಾಡಿ ಶಿವಗಿರಿ ಫ್ರೆಂಡ್ಸ್ ಆಟ್ರ್ಸ್&ಸ್ಪೋಟ್ರ್ಸ್ ಕ್ಲಬ್ ಹಾಗೂ ಪುಂಡೂರು-ಕರೋಡಿ ಹಿಂದೂ ಐಕ್ಯವೇದಿ ಇವರಿಂದ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ಪಾತ್ರೆ ಸಮರ್ಪಣೆ, ರಾತ್ರಿ 8ರಿಂದ ಮಹಾಪೂಜೆ, ಶ್ರೀಬಲಿ ಉತ್ಸವ, ವಸಂತಕಟ್ಟೆ ಪೂಜೆ, ಬೆಡಿಕಟ್ಟೆ ಪೂಜೆ, ಬೆಡಿಸೇವೆ, ದರ್ಶನಬಲಿ, ಶಯನ, ಕವಾಟಬಂಧನ ನಡೆಯಲಿಸದೆ.
ಫೆ. 02ರಂದು ಬೆಳಗ್ಗೆ 7:30ಕ್ಕೆ ಜಲದ್ರೋಣೀ ಪೂಜೆ, ಯಾತ್ರಾಹೋಮ, ಕವಾಟೋದ್ಘಾಟನೆÀ, ಕಣಿದರ್ಶನ, ಕಲಶಾಭಿಷೇಕ, ಬೆಳಗ್ಗಿನ ಪೂಜೆ. 9.30ರಿಂದ ಶ್ರೀಮತಿ ಸುಗುಣಾ ಬಿ. ತಂತ್ರಿ., 'ತಾಂತ್ರಿಕ ಸದನ' ಉಬ್ರಂಗಳ, 10ರಿಂದ ಸುಳ್ಯ ಶ್ರೀರಾಗಂ ಮಾ|ಅಭಿಷೇಕ್ ಯಂ., ಇವರಿಂದ ಶಾಸ್ತ್ರೀಯ ಸಂಗೀತ, 11ರಿಂದ ತುಲಾಭಾರ ಸೇವೆ, 11ರಿಂದ ಕಾವ್ಯವಾಚನ, ಗೋಪಾಲಕೃಷ್ಣ ಭಟ್ಟ ಕೊಚ್ಚಿ ವಾಚಿಸಲಿದ್ದು, ನಿವೃತ್ತ ಮುಖ್ಯೋಪಾಧ್ಯಾಯರು ನರಹರಿ ಕಳತ್ತೂರು ಪ್ರವಚನ ನೀಡಲಿದ್ದಾರೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ, ಅನ್ನದಾನ, ಅಪರಾಹ್ನ 2:30ರಿಂದ ಶ್ರೀಬಲಿ ಉತ್ಸವ, ವಸಂತಕಟ್ಟೆ ಪೂಜೆ, ಅವಭೃಥ ಸ್ನಾನ, ರಾಜಾಂಗಣ ಪ್ರಸಾದ, ದರ್ಶನಬಲಿ, ಧ್ವಜಾವರೋಹಣ, ಪೂಜೆ, ಮಂತ್ರಾಕ್ಷತೆ, ದೈವಗಳ ತಂಬಿಲ ಸೇವೆ ನಡೆಯಲಿದೆ ಎಂದು ಕ್ಷೇತ್ರ ಪ್ರಕಟನೆಯು ತಿಳಿಸಿದೆ.