HEALTH TIPS

ಶಾಲೆಯತ್ತ ಬೊಂಬೆ ಚಿತ್ತ- ಯಕ್ಷಗಾನ ಕಲೆ ಉಳಿದರೆ ಸಂಸ್ಕøತಿ, ಧರ್ಮ ಉಳಿಯುತ್ತದೆ : ಪುರುಷೋತ್ತಮ ಆಚಾರ್ಯ


         ಕುಂಬಳೆ: ಕಾಸರಗೋಡಿನ ಪಿಲಿಕುಂಜೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ರೂವಾರಿ ಕೆ.ವಿ.ರಮೇಶ್ ಅವರಿಂದ ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಕ್ಕಳಿಗಾಗಿ ಬೊಂಬೆಯಾಟ ಪ್ರದರ್ಶನ-ಪ್ರಾತ್ಯಕ್ಷಿಕೆ ಗುರುವಾರ ನೆರವೇರಿತು. ದೇಶ-ವಿದೇಶಗಳಲ್ಲೂ ಬೊಂಬೆಯಾಟ ಕಾರ್ಯಕ್ರಮ ನಡೆಸಿ ಸೈ  ಎನಿಸಿಕೊಂಡ ಕಾಸರಗೋಡಿನ ಪಿಲಿಕುಂಜೆಯಲ್ಲಿರುವ ಯಕ್ಷ ಪುತ್ಥಳಿ ಬೊಂಬೆಮನೆಯ ಕೆ.ವಿ.ರಮೇಶರ ಬಳಗ ನರಕಾಸುರ ವಧೆ ಎಂಬ ಕಥಾಭಾಗವನ್ನು ಪ್ರದರ್ಶಿಸಿ, ಮಕ್ಕಳಿಗೆ ಬೊಂಬೆಯಾಡಿಸುವ ಕೈಚಳಕದ ಬಗ್ಗೆ ಮಾಹಿತಿ ನೀಡಿದರು.
       ಬೊಂಬೆಯಾಟಕ್ಕೆ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ  ಪುರುಷೋತ್ತಮ ಆಚಾರ್ಯ ದೀಪಬೆಳಗಿ ಮಾತನಾಡಿ, ಯಕ್ಷಗಾನ ಕಲೆ ಉಳಿದರೆ ನಮ್ಮ ಸಂಸ್ಕøತಿ,ಧರ್ಮ ಉಳಿಯುತ್ತದೆ. ಅದು ಉಳಿಯಬೇಕಿದ್ದರೆ ಶಾಲಾ ಮಕ್ಕಳಿಗೆ ಅರಿವಿನ ಜಾಗೃತಿ ಆಸಕ್ತಿದಾಯಕವಾಗಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅಭಿನಂದನೀಯ ಎಂದರು.
        ಚಿತ್ರಕಲಾ ಅಧ್ಯಾಪಕ ಶಿವಾನಂದ ಅವರು ಯಕ್ಷಗಾನದ ಹಿನ್ನೆಲೆಯ ಪ್ರಾರ್ಥನೆ ಹಾಡಿದರು. ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್.ಮುನ್ನಿಪ್ಪಾಡಿ, ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯಶಿಕ್ಷಕಿ  ಚಿತ್ರಾಸರಸ್ವತಿ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries