ಕುಂಬಳೆ: ಕುಂಬಳೆ ಸೀಮೆಯ ಇಚ್ಲಂಪಾಡಿ ದರ್ಬಾರ್ಕಟ್ಟೆ ಸಮೀಪದ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಇಂದಿನಿಂದ (ಫೆ.28ರಿಂದ)ಆರಂಭಗೊಂಡು ಮಾ.7ರ ತನಕ ನಡೆಯಲಿದೆ.
ಇಂದು(ಶುಕ್ರವಾರ)ಬೆಳಿಗ್ಗೆ 5 ರಿಂದ ಗಣಪತಿ ಹವನ, ಉಗ್ರಾಣವರಣ, ಮಧ್ಯಾಹ್ನ ಮಹಾಪೂಜೆ, ಸಂಜೆ 5 ರಿಂದ ತಂತ್ರಿವರ್ಯರಾದ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಬಳಿಕ ಆಚಾರ್ಯವರಣ, ಅಂಕುರಾರೋಹಣ, ಪ್ರಾಸಾದ ಶುದ್ದಿ, ಸ್ಥಳಶುದ್ದಿ, ರಕ್ಷಾ ಕಲಶಪೂಜೆ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಕಲಶ ಪೂಜೆ, ವಾಸ್ತುಬಲಿ, ರಾತ್ರಿ ಪೂಜೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7 ರಿಂದ ಶಿಶಿರ ಬಾಲಸಭೆ ಕೋಟೆಕ್ಕಾರ್ ತಂಡದಿಂದ ಕಾರ್ಯಕ್ರಮ ವೈವಿಧ್ಯಗಳು, 8 ರಿಂದ ರಾಜರಾಜೇಶ್ವರಿ ಮಹಿಳಾ ಸಂಘ ಮುಂಡಪ್ಪಳ್ಳ ಇವರಿಂದ ನೃತ್ಯ ವೈವಿಧ್ಯಗಳು ನಡೆಯಲಿವೆ.
ಇಂದಿನ ಕಾರ್ಯಕ್ರಮ(ಶನಿವಾರ):
ಶನಿವಾರ ಬೆಳಿಗ್ಗೆ 5 ರಿಂದ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 4 ರಿಂದ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆಯಲ್ಲಿ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಆಶೀರ್ವಚನ ನೀಡುವರು. ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್, ಶಾಸಕ ಎನ್.ಎ.ನೆಲ್ಲಿಕುನ್ನು, ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಸುಗಣಾ ಬಿ.ತಂತ್ರಿ ದೇಲಂಪಾಡಿ, ಪುಂಡರೀಕಾಕ್ಷ ಕೆಎಲ್, ಕೋಳಾರು ಕುಂಞಣ್ಣ ಭಂಡಾರಿ, ಸತ್ಯಶಂಕರ ಭಟ್, ಗೀತಾ ಲೋಕನಾಥ ಶೆಟ್ಟಿ, ರಘುರಾಮ ರೈ, ಸೋಮಶೇಖರ ಜೆ.ಎಸ್., ಸದಾನಂದ ಕಾಮತ್, ಎಂ.ಸುಕುಮಾರ, ಶಂಕರನಾರಾಯಣ ಭಟ್, ಬಾಬು ಪಚ್ಚಿಲಂಪಾರೆ ಮತ್ತಿತರರು ಉಪಸ್ಥಿತರಿರುವರು.
ಬ್ರಹ್ಮಕಲಶಾಭಿಷೇಕದಂಗವಾಗಿ ವಿವಿಧ ದಿನಗಳಲ್ಲಿ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭಾ ಕಾರ್ಯಕ್ರಮಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಫೆ.4ರಂದು ಬೆಳಗ್ಗೆ 7.45ರ ಮೃಗಶಿರಾ ನಕ್ಷತ್ರ ಮೀನ ಲಗ್ನ ಶುಭಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯುವುದು. ಫೆ.7ರಂದು ಬೆಳಗ್ಗೆ 7.30ರಿಂದ 9.20ರ ಮಧ್ಯೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯುವುದು. ಪ್ರತೀ ದಿನ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ ನಡೆಯುವುದು.



