ಕಾಸರಗೋಡು: ಪ್ರತಿರೋಧ ಚಟುವಟಿಕೆಗಳಿಗೆ ಸಿ.ಪಿ.ಸಿ.ಆರ್.ಐ ಹೆಗಲು ನೀಡಿ ರಂಗಕ್ಕಿಳಿದಿದೆ. ಇದರ ಮೊದಲ ಹಂತವಾಗಿ ರೋಗಪತ್ತೆ ಪ್ರಯೋಗಾಲಯದ ಸಾಮಾಗ್ರಿಗಳನ್ನು ಪೆರಿಯ ಕೇಂದ್ರೀಯ ವಿವಿಯ ಕೋವಿಡ್-19 ತಪಾಸಣೆ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. ಸಿ.ಪಿ.ಸಿ.ಆರ್.ಐ. ನಿರ್ದೇಶಕಿ ಡಾ.ಅನಿತಾ ಕರುಣ್ ಅವರು ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ಅವರೊಂದಿಗೆ ನಡೆಸಿದ ಮಾತುಕತೆಯ ಹಿನ್ನೆಲೆಯಲ್ಲಿ ಸಿ.ಪಿ.ಸಿ.ಆರ್.ಐ.ಯ ಬಯೋಟೆಕ್ನಾಲಜಿ ಪ್ರಯೋಗಾಲಯದಿಂದ ಎರಡು ರಿಯಲ್ ಟೈಂ ಪಿ.ಸಿ.ಆರ್. ಮೆಷಿನ್ಗಳನ್ನು ನೀಡಲಾಗಿದೆ. ತಪಾಸಣೆ ಪ್ರಯೋಗಾಲಯ ಪೂರ್ಣ ರೂಪದಲ್ಲಿ ಸಜ್ಜುಗೊಳ್ಳುವ ವೇಳೆ ಸಿ.ಪಿ.ಸಿ.ಆರ್.ಐ.ಯ ಮೂವರು ತಾಂತ್ರಿಕ ತಜ್ಞರ ಸೇವೆಯೂ ಈ ಪ್ರಯೋಗಾಲಯದಲ್ಲಿ ಲಭ್ಯವಿರುವುದು.
ವೆರ್ಜಿನ್ ತೆಂಗಿನೆಣ್ಣೆ ಬಳಸಿ ಹ್ಯಾಂಡ್ ಸಾನಿಟೈಸರ್ ಸಿದ್ಧಪಡಿಸುವ ಯೋಜನೆ ಸಿ.ಪಿ.ಸಿ.ಆರ್.ಐ.ಯಲ್ಲಿ ಸಿದ್ಧವಾಗಿದೆ. ಇದಕ್ಕೆ ಬೇಕಾದ ಸ್ಪಿರಿಟ್ ಶೀಘ್ರದಲ್ಲೇ ಒದಗಿಸುವ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಇದು ಲಭಿಸುತ್ತಿದ್ದಂತೆ ಸಾನಿಟೈಸರ್ ಉತ್ಪಾದನೆ ಆರಂಭಗೊಳ್ಳಲಿದೆ.
ಸಿ.ಪಿ.ಸಿ.ಆರ್.ಐ. ಚಂದ್ರಗಿರಿ ಅತಿಥಿಗೃಹ ಪೆÇಲೀಸರಿಗೆ :
ಸಿ.ಪಿ.ಸಿ.ಆರ್.ಐ.ಯ ಚಂದ್ರಗಿರಿ ಅತಿಥಿಗೃಹ ಜಿಲ್ಲೆಯ ಸುರಕ್ಷಾ ವ್ಯವಸ್ಥೆಗಳಿಗೆ ನೇತೃತ್ವ ವಹಿಸುವ ಪೆÇಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ವಸತಿಗೆ ನೀಡಲಾಗಿದೆ. ಇದಲ್ಲದೆ ಅಗತ್ಯಬಿದ್ದರೆ ಐಸೊಲೇಷನ ವ್ಯವಸ್ಥೆ ಏರ್ಪಡಿಸುವಿಕೆಗೆ ಅತಿಥಿ ಗೃಹಗಳನ್ನು ಜಿಲ್ಲಾಡಳಿತೆಗೆ ನೀಡಲು ಸಿದ್ಧರಿರುವುದಾಗಿ ಸಿ.ಪಿ.ಸಿ.ಆರ್.ಐ. ನಿರ್ದೇಶಕಿ ಡಾ.ಅನಿತಾ ಕರುಣ್ ತಿಳಿಸಿದರು.