ಬದಿಯಡ್ಕ: ಕುಂಬ್ಡಾಜೆ ಗ್ರಾ.ಪಂ. ವ್ಯಾಪ್ತಿಯ ಏತಡ್ಕದಲ್ಲಿರುವ ಸಾರ್ವಜನಿಕ ವಿತರಣಾ ಕೇಂದ್ರ(ರೇಶನ್ ಅಂಗಡಿ) ನಿರ್ವಾಹಕ ಉದಯ ಕುಮಾರ್ ಪಿ.ಕೆ ಅವರು ಸಾರ್ವಜನಿಕರಿಗೆ ಕೊರೋನಾ ಸೋಂಕು ತಡೆಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಮರಸ ಸುದ್ದಿ ಮಾ.20 ರಂದು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾ ಕೊರೋನ ನಿಯಂತ್ರಣ ಕೇಂದ್ರದ ಸಹಾಯಕ ನೋಡೆಲ್ ಅಧಿಕಾರಿ ಡಾ.ನಾರಾಯಣ ಪ್ರದೀಪ್ ಅವರು ಕುಂಬ್ಡಾಜೆ ಸರ್ಕಾರಿ ಆಸ್ಪತ್ರೆಯಲ್ಲಿ ಉದಯಕುಮಾರ್ ಅವರ ಮಹತ್ವದ ಸೇವಾ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕುಂಬ್ಡಾಜೆ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಸುಹೈಬ್ ಕುಂಬ್ಳೆ ಉಪಸ್ಥಿತರಿದ್ದರು.
ಏತಡ್ಕ ರೇಶನ್ ನಿರ್ವಾಹಕರಿಗೆ ವೈದ್ಯಾಧಿಕಾರಿಗಳ ಅಭಿನಂದನೆ
0
ಮಾರ್ಚ್ 21, 2020
ಬದಿಯಡ್ಕ: ಕುಂಬ್ಡಾಜೆ ಗ್ರಾ.ಪಂ. ವ್ಯಾಪ್ತಿಯ ಏತಡ್ಕದಲ್ಲಿರುವ ಸಾರ್ವಜನಿಕ ವಿತರಣಾ ಕೇಂದ್ರ(ರೇಶನ್ ಅಂಗಡಿ) ನಿರ್ವಾಹಕ ಉದಯ ಕುಮಾರ್ ಪಿ.ಕೆ ಅವರು ಸಾರ್ವಜನಿಕರಿಗೆ ಕೊರೋನಾ ಸೋಂಕು ತಡೆಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಮರಸ ಸುದ್ದಿ ಮಾ.20 ರಂದು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾ ಕೊರೋನ ನಿಯಂತ್ರಣ ಕೇಂದ್ರದ ಸಹಾಯಕ ನೋಡೆಲ್ ಅಧಿಕಾರಿ ಡಾ.ನಾರಾಯಣ ಪ್ರದೀಪ್ ಅವರು ಕುಂಬ್ಡಾಜೆ ಸರ್ಕಾರಿ ಆಸ್ಪತ್ರೆಯಲ್ಲಿ ಉದಯಕುಮಾರ್ ಅವರ ಮಹತ್ವದ ಸೇವಾ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕುಂಬ್ಡಾಜೆ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಸುಹೈಬ್ ಕುಂಬ್ಳೆ ಉಪಸ್ಥಿತರಿದ್ದರು.



