ಕಾಸರಗೋಡು: ಕಾಸರಗೋಡು ಜಿಲ್ಲಾ ಶಿಶು ಕಲ್ಯಾಣ ಸಮಿತಿ ಆಡಳಿತೆ ಸಮಿತಿಗೆ 2020-2013 ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಕಾರ್ಯದರ್ಶಿಯಾಗಿರುವರು. ಸಮಾರಂಭದಲ್ಲಿ ಟಿ.ಎಂ.ಎ.ಕರೀಂ ಪ್ರತಿಜ್ಞೆ ಬೋಧಿಸಿದರು.
ಪದಾಧಿಕಾರಿಗಳು: ಉಪಾಧ್ಯಕ್ಷ-ಚೆರುವತ್ತೂರು ಮೂಲಕಂಡಂನ ಕೆ.ರಮಣಿ, ಜೊತೆ ಕಾರ್ಯದರ್ಶಿ ಪಾಕಂ ಪಳ್ಳಿಪುಳದ ವಿ.ಸೂರಜ್, ಕೋಶಾಧಿüಕಾರಿ-ಚೆರುವತ್ತೂರು ಪುದಿಯಕಂಡಂನ ಸಿ.ವಿ.ಗಿರೀಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರಡ್ಕ ಕಾನಕ್ಕೋಡ್ ಕೆ.ಜಯನ್, ಕೋಳವಯಲ್ ಎಂ.ವಿ.ನಾರಾಯಣನ್, ಕರಿಂದಳಂ ಓಮಚ್ಚೇರಿಯ ಕೆ.ಸತೀಶನ್, ಪಡನ್ನ ಕಡಪ್ಪುರಂನ ಪಿ.ಶ್ಯಾಮಲಾ ಅವರನ್ನು ಆಯ್ಕೆ ಮಾಡಲಾಯಿತು.

