HEALTH TIPS

ಹೆಚ್ಚಿನ ದರ ವಸೂಲಿ-ವ್ಯಾಪಾರಿ ಸಂಸ್ಥೆಗಳಿಗೆ ಲೀಗಲ್ ಮೆಟ್ರಾಲಜಿ ಮಿಂಚಿನ ದಾಳಿ


       ಕಾಸರಗೋಡು: ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ನಿತ್ಯೋಪಯೋಗಿ ಸಾಮಾಗ್ರಿಗಳ ಲಭ್ಯತೆಯ ವ್ಯಾಪಾರ ಸಂಸ್ಥೆಗಳಲ್ಲಿ ಗುರುವಾರ ಕೆಲವೆಡೆ ಜಿಲ್ಲಾ ಅಳತೆ ನಿಯಂತ್ರಣ ವಿಭಾಗ ಮಿಂಚಿನ ತಪಾಸಣೆ ನಡೆಸಿದೆ. ಸಾನಿಟೈಸರ್, ಬಾಟಲಿ ನೀರು ಇತ್ಯಾದಿಗಳಿಗೆ ಹೆಚ್ಚಿನ ಬೆಲೆ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ತಲಾ ಒಂದು ಕೇಸು ದಾಖಲಿಸಲಾಗಿದೆ. ತಪಸಣೆಗೆ ಕಾಸರಗೋಡು ಲೀಗಲ್ ಮೆಟ್ರಾಲಜಿ ಡೆಪ್ಯೂಟಿ ಕಂಟ್ರೋಲರ್ ಶ್ರಿನಿವಾಸಪಿ., ಮಂಜೇಶ್ವರ ಲೀಗಲ್ ಮೆಟ್ರಾಲಜಿ ಇನ್ಸ್ ಪೆಕ್ಟರ್ ಶಶಿಕಲಾ ಕೆ., ಇತರ ಮೆಟ್ರಾಲಜಿ ಸಿಬ್ಬಂದಿ ಶ್ರೀಜಿತ್, ರಾಬರ್ಟ್ ಪೆರೆರ, ಮುಸ್ತಫ ಟಿ.ಕೆ.ಪಿ. ನೇತೃತ್ವ ವಹಿಸಿದ್ದರು. ಅಂಗಡಿಗಳಲ್ಲಿ ತರಕಾರಿ ಬೆಲೆ ಪಟ್ಟಿ ಗ್ರಾಹಕರಿಗೆ ಕಾಣಿಸುವಂತೆ ಇರಿಸಬೇಕು ಎಂಬ ಆದೇಶ ನೀಡಲಾಗಿದೆ. ಅಕ್ಕಿ, ಸಕ್ಕರೆ, ಬೇಳೆ, ತರಕಾರಿ, ಹಾಲು ಇತ್ಯಾದಿ ಲಭ್ಯತೆ ಖಚಿತಪಡಿಸುವ ಮತ್ತು ಕಾಳಸಂತೆ, ಅಕ್ರಮ ದಾಸ್ತಾನು ತಡೆಯುವ ನಿಟ್ಟಿನಲ್ಲಿ ತಪಾಸಣೆನಡೆಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಈಗಾಗಲೇ ಆದೇಶ ನೀಡಿದ್ದಾರೆ. ತಪಾಸಣೆ ಮುಂದುವರಿಯಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
          ಆಹಾರ ಸಾಮಾಗ್ರಿಗಳ ವಿತರಣೆ:
     ಕೋವಿಡ್-19 ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಮನೆಗಳಲ್ಲೇ ಉಳಿದುಕೊಂಡವರಿಗೆ ಆಹಾರ ಸಾಮಾಗ್ರಿ ಒದಗಿಸುವ ಯೋಜನೆಗೆ ಪಳ್ಳಿಕ್ಕರೆ ಗ್ರಾಮಪಂಚಾಯತ್ ಚಾಲನೆ ನೀಡಿದೆ. ಆಹಾರ ಸಾಮಾಗ್ರಿಒದಗಿಸುವಲ್ಲಿ ಸ್ಥಳೀಯಾಡಳಿತಸಂಸ್ಥೆಗಳು ಗಮನಹರಿಸಬೇಕು ಎಂಬ ಮುಖ್ಯಮಂತ್ರಿ ಅವರ ಆದೇಶ ಪ್ರಕಾರ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಇದರಅಂಗವಾಗಿ ಅಕ್ಕಿ, ಧಾನ್ಯ ಇತ್ಯಾದಿಗಳ ಕಿಟ್ ವಿತರಿಸಲಾಗುತ್ತಿದೆ.ಯೋಜನೆಯ ಅಂಗವಾಗಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಇತರ ರಾಜ್ಯಗಳ ಕಾರ್ಮಿಕರಿಗೆ ಆಹಾರ ಧಾನ್ಯಗಳವಿತರಣೆ ನಡೆಸಲಾಗಿದೆ. ನೂರಾರು ಮಂದಿ ಹೊರರಾಜ್ಯಗಳ ಕಾರ್ಮಿಕರು ಇಲ್ಲಿದ್ದಾರೆ.ಸ್ವಯಂ ಸೇವಾ ಸಂಘಟನೆಗಳಸಹಕಾರದೊಂದಿಗೆ ಆಹಾರ ಧಾನ್ಯಗಳನ್ನು ಕಾರ್ಮಿಕರು ವಾಸಿಸುತ್ತಿರುವ ಕೇಂದ್ರಗಳಿಗೆ ತೆರಳಿ ವಿತರಿಸಲಾಗಿದೆ.
      

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries