HEALTH TIPS

ಖಜಾನೆಗೆ ಗುಂಪಾಗಿ ಬರಬೇಡಿ- ಜಿಲ್ಲಾ ಟ್ರೆಷರಿ ಅಧಿಕಾರಿ

 
        ಕಾಸರಗೋಡು: ಜಿಲ್ಲಾ ಮತ್ತು ಉಪ ಖಜಾನೆ(ಟ್ರೆಷರಿ)ಗೆ ಜನ ಗುಂಪಾಗಿ ಬಾರದೆ, ಸಾಮಾಜಿಕ ಅಂತರ ಪಾಲಿಸಬೇಕು ಎಂದು ಜಿಲ್ಲಾ ಟ್ರೆಷರಿ ಅಧಿಕಾರಿ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲಾ ಖಜಾನೆಯ ವ್ಯಾಪ್ತಿಯ ಉಪ ಖಜಾನೆಗಳಲ್ಲಿ ಏ.2ರಿಂದ ಪಿಂಚಣಿ ವಿತರಣೆಗೆ ಸಂಬಂಧಿಸಿ, ಪಿಂಚಿದಾರರ ಸಂಘಟನೆಗಳ, ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಪಿಂಚಣಿದಾರರು ಖಜಾನೆಗಳಿಗೆ ಗುಂಪಾಗಿಬರುವುದನ್ನು ನಿಯಂತ್ರಿಸಬೇಕು ಎಂದವರು ಆಗ್ರಹಿಸಿದರು. ಬಿಯರರ್ ಚೆಕ್ ಗಳನ್ನು ಗರಿಷ್ಠ ಮಟ್ಟದಲ್ಲಿ ಬೆಂಬಲಿಸುವುದು, ಪ್ರತಿವಾರ್ಡ್ ನಿಂದ ಹತ್ತು, ಇಪ್ಪತ್ತು ಚೆಕ್ ಗಳು ಒಬ್ಬ ಹೊಣೆಗಾರಿಕೆಯಿರುವ ವ್ಯಕ್ತಿ(ಸ್ಥಳೀಯಾಡಳಿತ ಸಂಸ್ಥೆಯ ಯಾ ಪಿಂಚಣಿದಾರರಸಂಘಟನೆಗಳ ಪದಾಧಿಕಾರಿ) ಸಂಗ್ರಹಿಸಿ ಖಜಾನೆಗೆ ತಲಪಿಸಿದರೆ , ಅವರ ಮೂಲಕ ಮೊತ್ತ  ನೀಡುವ ವ್ಯವಸ್ಥೆ ಮಾಡಲಾಗುವುದು. ಇದರಲ್ಲಿ ರೋಗಿಗಳಿಗೆ ಮತ್ತು ವಯೋವೃದ್ಧ ಪಿಂಚಣಿದಾರರಿಗೆ ಆದ್ಯತೆ ನೀಡಲಾಗುವುದು. ಹಣದ ತುರ್ತು ಅಗತ್ಯವಿಲ್ಲದವರು ಏ.14ರ ನಂತರ ಖಜಾನೆಗೆ ಹಾಜರಾದರೆ ಸಾಕು. ಹೆಚ್ಚಿನ ಮಾಹಿತಿಗಾಗಿ ಕಾಸರಗೋಡು ಜಿಲ್ಲಾ ಟ್ರೆಷರಿ: 8443044033, 8943368200, 9496000251., ಮಂಜೇಶ್ವರ ಸಬ್ ಟ್ರೆಷರಿ: 9496000256, ಕಾಸರಗೋಡು ಸಬ್ ಟ್ರೆಷರಿ: 9496000252, ಚಟ್ಟಂಚಾಲ್ ಸಬ್ ಟ್ರೆಷರಿ: 9496000257 , ಹೊಸದುರ್ಗ ಸಬ್ ಟ್ರೆಷರಿ: 9496000254 , ವೆಳ್ಳರಿಕುಂಡ್ ಸಬ್ ಟ್ರೆಷರಿ: 9496000255, ಮಾಲಕ್ಕಲ್ ಸಬ್ ಟ್ರೆಷರಿ: 9188523027 , ನೀಲೇಶ್ವರ ಸಬ್ ಟ್ರೆಷರಿ: 9496000253 ದುರವಾಣಿ ಸಂಕ್ಯೆಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries