HEALTH TIPS

ಲಾಕ್ ಡೌನ್ : ಅಪರಾಧ ಕೃತ್ಯಗಳು ಕಡಿಮೆ

     
         ಕಾಸರಗೋಡು: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿರುವುದರಿಂದ ಕಾಸರಗೋಡು ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ಕಡಿಮೆಯಾಗಿದೆ.
    ಕಳೆದ ಮಾ.23 ರಿಂದ ಜಿಲ್ಲೆಯಲ್ಲಿ ಬಹುತೇಕ ಪೆÇಲೀಸ್ ಠಾಣೆಗಳಲ್ಲಿ ಸಾಮಾನ್ಯವಾಗಿ ಬರುವ ದೂರಗಳು ಒಂದೂ ಬಂದಿಲ್ಲ ಎಂದು ಪೆÇಲೀಸರು ತಿಳಿಸಿದ್ದಾರೆ. ನಿಷೇಧಾಜ್ಞೆ ಉಲ್ಲಂಘಿಸಿ ಬೀದಿಗೆ ಬಂದ ಕೇಸುಗಳು ಮಾತ್ರವೇ ದಾಖಲಾಗಿದೆ.
     ಲಾಕ್ ಡೌನ್ ಆರಂಭಿಸಿದ ಮಾ.21 ರಂದು ಕರಾವಳಿ - ಟ್ರಾಫಿಕ್ ಠಾಣೆಗಳ ಸಹಿತ 19 ಠಾಣೆಗಳ ಪೈಕಿ ಮೂರರಲ್ಲಿ ಮಾತ್ರವೇ ನಿಯಂತ್ರಣ ಉಲ್ಲಂಘನೆ ಕೇಸು ಹೊರತು ಪಡಿಸಿ ಕೇಸು ದಾಖಲಿಸಲಾಗಿದೆ. ಕಾಸರಗೋಡು, ರಾಜಪುರಂ ಮತ್ತು ಆದೂರು ಠಾಣೆಗಳಲ್ಲಿ ತಲಾ ಒಂದರಂತೆ ಕೇಸುಗಳನ್ನು ದಾಖಲಿಸಲಾಗಿದೆ.
     ಸಾಮಾನ್ಯವಾಗಿ ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ಎಲ್ಲಾ ದಿನಗಳಲ್ಲಿ ಒಂದಕ್ಕೂ ಹೆಚ್ಚು ಕೇಸುಗಳು ದಾಖಲಾಗುತ್ತವೆ. ಕಾಸರಗೋಡು, ಕುಂಬಳೆ, ಮಂಜೇಶ್ವರ, ಹೊಸದುರ್ಗ ಮೊದಲಾದ ಠಾಣೆಗಳಲ್ಲಿ ಹೆಚ್ಚಿನ ಕೇಸುಗಳು ದಾಖಲಾಗುತ್ತಿವೆ.
      ವಾಹನಗಳು ರಸ್ತೆಗಿಳಿಯದಿರುವುದರಿಂದ ವಾಹನ ಅಪಘಾತ ಮತ್ತು ಈ ಸಂಬಂಧ ಕೇಸುಗಳು ಕಡಿಮೆಯಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾಹನಗಳು ಮತ್ತು ಜನರು  ರಸ್ತೆ ಗಿಳಿಯದಿರುವುದರಿಂದ ಅಪರಾಧ ಕೃತ್ಯಗಳು ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಗಡಿ ಪ್ರದೇಶದ ಠಾಣೆಗಳಲ್ಲಿ ದಿನಾ ಮಾದಕ ವಸ್ತುಗಳ ಸಂಬಂಧ ಕೇಸುಗಳು ದಾಖಲಾಗುತ್ತಿತ್ತು. ಆದರೆ ಲಾಕ್‍ಡೌನ್ ಬಳಿಕ ಒಂದೇ ಒಂದು ಕೇಸು ದಾಖಲಾಗಿಲ್ಲ. ಆದರೆ ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿಯುತ್ತಿರುವ ಜನರನ್ನು ನಿಯಂತ್ರಿಸುವುದು ಸವಾಲಾಗಿದೆ ಎಂದು ಪೆÇಲೀಸರು ಹೇಳುತ್ತಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries