ಸಮರಸ ಚಿತ್ರ ಸುದ್ದಿ: ಕುಂಬಳೆ: ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷೆಯಾಗಿ ಪಡ್ರೆಯ ಸವಿತಾ ಬಾಳಿಕೆ ಅವರನ್ನು ವಿದ್ಯುಕ್ತವಾಗಿ ಘೋಷಿಸಲಾಗಿದೆ. ಬಿಜೆಪಿ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ ಅವರು ಈ ಬಗ್ಗೆ ಘೋಷಿಸಿದ್ದು, ಸವಿತಾ ಬಾಳಿಕೆ ಅವರು ಪ್ರಸ್ತುತ ಬ್ಲಾ.ಪಂ.ಸದಸ್ಯೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.